ನಾಡಿನ ಖ್ಯಾತ ರಂಗಕರ್ಮಿ ತೊ. ನಂಜುಂಡಸ್ವಾಮಿ ಅವರ ನೆನಪಿನ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಿತು.
ನಂಜುಂಡಸ್ವಾಮಿ ಗೆಳೆಯರ ಬಳಗ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು .
ಖ್ಯಾತ ನಾಟಕಕಾರರಾದ ಹೂಲಿ ಶೇಖರ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಾಣೆಹಳ್ಳಿ ಮಠದ ಶ್ರೀ ಶಿವಕುಮಾರ ಪಂಡಿತಾರಾಧ್ಯ ಸ್ವಾಮೀಜಿ, ಹೃದ್ರೋಗ ತಜ್ಞ ಡಾ. ಸಿ ಎನ್ ಮಂಜುನಾಥ್, ನಿರ್ದೇಶಕ ಬಿ ಸುರೇಶ್, ರಂಗ ಸಂಘಟಕ ಶ್ರೀನಿವಾಸ ಜಿ ಕಪ್ಪಣ್ಣ ಹಾಗೂ ರಂಗಕರ್ಮಿ ಗುಂಡಣ್ಣ ಅವರು ಮಾತಾಡಿದರು .
ಮೈಸೂರಿನ ನಟನ ತಂಡ ಶ್ರೀಪಾದ ಭಟ್ ಅವರ ನಿರ್ದೇಶನದ ‘ಕಣಿವೆಯ ಹಾಡು’ ನಾಟಕವನ್ನು ಪ್ರದರ್ಶಿಸಿತು.
ಈ ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.
ಚಿತ್ರಗಳು : ಮೆಹಬೂಬ್ ಮಠದ ಹಾಗೂ ಸಂಘಟಕರ ಸಂಗ್ರಹದಿಂದ.
0 ಪ್ರತಿಕ್ರಿಯೆಗಳು