ವಿಮರ್ಶಕ ಶ್ರೀಶೈಲ ನಾಗರಾಳ ಕಂಡಂತೆ ಕಾರ್ಯಕ್ರಮ ಹೀಗಿತ್ತು
ಇಂದು ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಲಸಂಗಿ ಗೆಳೆಯರ ಪ್ರತಿಷ್ಠಾನದ 2021 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಮಧುರ ಚೆನ್ನ ಕವಿಯ ಅನುಭಾವ ಪದ ಮತ್ತು ಖಾಜಾ ಕವಿಯ ಲಾವಣಿ ಪದ ಹಾಡುವುದರ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.
ಡಾ ಚಂದ್ರಶೇಖರ ನಂಗಲಿ ಹಾಗೂ ಡಾ ನಟರಾಜ ಬೂದಾಳು ಅವರು ಸಿಂಪಿ ಲಿಂಗಣ್ಣ ಅವರ ಪ್ರಬಂಧ ಸಾಹಿತ್ಯ ಕುರಿತು ಪ್ರಬಂಧ ಮಂಡನೆ ಮಾಡಿದರು.
ಹಲಸಂಗಿ ಗೆಳೆಯರು ಅನುಭಾವ ಕವಿ ಮಧುರ ಚೆನ್ನ, ಜಾನಪದ ವಿದ್ವಾಂಸರು ಸಿಂಪಿ ಲಿಂಗಣ್ಣ ಲಾವಣಿ, ಕವಿ ಪಿ ಧೂಲಾ ಸಾಬ್ ರೇವಪ್ಪ ಕಾಪಸೆ, ಅವರ ಭಾವಚಿತ್ರಗಳನ್ನು ಅತಿಥಿಗಳು ಅನಾವರಣ ಮಾಡಿದರು.
ಕಥೆಗಾರ ಚಿಂತಕರು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಪ್ರೊ ಎಚ್ ಟಿ ಪೋತೆ ಅವರು ಹಲಸಂಗಿ ಗೆಳೆಯರು ಮತ್ತು ಜನಪದ ಕುರಿತು ಪ್ರಬಂಧ ಸಾದರ ಪಡಿಸಿದರು.
ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.
0 ಪ್ರತಿಕ್ರಿಯೆಗಳು