ಹರಿದು ನಾಲಾಬಂದಿಯಾಗುತ್ತಿದೆ ಕಣ್ಣೀರು

ದೇವು ಮಾಕೊಂಡ

ಸದ್ಯ ನೀರ ಮೇಲೆ
ನೆನಪು ಬರೆದು
ಗಾಳಿಗೆ ಮುಖ ಮಾಡಿ
ನಿಂತಿದ್ದೇವೆ ನಾವು
ಬೋದಿ ವೃಕ್ಷದ ನೆನಪು ಮೆಲಕು ಹಾಕುತ್ತ

ನೀನು ಹಚ್ಚಿಟ್ಟು ಹೋದ
ಸಾಲು ಮರದ ಕೆಳಗಿನ ದೀಪಗಳು
ಉರಿಯದೇ ನಿಂತಿವೆ
ಸ್ಥಬ್ದ
ನಿಶಬ್ದ!

ನಿನ್ನ ಕಾಲ ಚರಿತ್ರಾರ್ಹ ಬಿಡು ದೊರೆಯೇ
ಅಲ್ಲಿ
ರಣರಂಗದ ಹೆಣಗಳೂ ಕಟ್ಟಿಕೊಂಡಿದ್ದವು
ರಂಗಸಜ್ಜಿಕೆ
ಕ್ಷಣಕಾಲ ಮರೆತು
ಬಹುಪರಾಕಿನೊಂದಿಗೆ
ಧರ್ಮಚಕ್ರದ ಮೇಲೆ ನೀನು
ಹಿಡಿದು ನಿಂತಾಗ

ನಮ್ಮ ಕಾಲವೂ
ಒಮ್ಮೆ ನೋಡು ಪ್ರಭು
ಹರಿದು ನಾಲಾಬಂದಿಯಾಗುತ್ತಿದೆ
ನಮ್ಮೊಳಗಿನ ಕಣ್ಣೀರು
ಕಲ್ಲು ಶಾಸನಗಳ ಎದುರಿಗೆ

ನಿನ್ನ ದರುಶನವಿಲ್ಲಿ ಶೂನ್ಯ ಬಿಂದುವಿನಲಿ
ಕಪ್ಪಾಗಿ ನಿಂತಿದೆ
ಪ್ರೇಮ ಜ್ಯೋತಿಯನು ಬದಿಗಿರಿಸಿ

ಒಂದು ಕ್ಷಣ
ಮಿಂಚು ಮಿನುಗು ಕಣ್ಣೆದುರು ಕಂಪನ
ದೃಷ್ಟಿ ಏಕಮುಖ ಚಲನೆ
ಕರಾಳ ಕತ್ತಲು
ಕೆಸರು ರಾಡಿಯಲಿ
ಬಿದ್ದು ಎದ್ದು ಹೊರಟಾಗ
ಇನ್ನಷ್ಟು ದಟ್ಟ ಕತ್ತಲು ಕವಿಸುತ್ತದೆ
ಭೋರಿಡುವ ಉಸಿರಿಗೂ ಕಿವಿಗೊಡದೆ

‍ಲೇಖಕರು Avadhi

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: