ಅವ್ವನ ದಿವಸ ನಾಳೆ..

ಪ್ರಶಾಂತ್ ಹಿರೇಮಠ

ಸುತ್ತು ಬಳಸು ಯಾಕೆ..?
ಜಾಂಬಳಿ, ಬಿಳಿ.. ನೀಲಿ ಅಲ್ಲಲ್ಲಿ..
ಅಹಂ ಬ್ರಹ್ಮಾಸ್ಮಿ.. ಬ್ರಹ್ಮ.. ನಾನೇ..
ಹುಟ್ಟಿದ್ದು ಯಾಕೆ ನೀ..?
ಏ.. ಬ್ರಹ್ಮ.., ಹುಟ್ಟಿಸಿದ್ದು ಯಾಕೆ ನೀ..?

ಎತ್ತರದಲಿ ಹಾರುತಿದೆ ಹೊಂಚುತ ಹದ್ದು
ಎದೆ ಒತ್ತಿ ಹೊತ್ತೊಯ್ಯುದಕೆ
ರೆಕ್ಕೆ ಬಿಚ್ಚಿ ಭೀಭತ್ಸ ಸೌಂದರ್ಯ ಆಗಸದಗಲ
ಅಂಜಿಸುತ ಅಲೆ ಎಬ್ಬಿಸಿ ತೋರಿದೆ
ಊರುವ ಉಗುರುಗಳ
ಮರೆಮಾಡಿ ಸೂರ್ಯನನೇ
ಕತ್ತಲನು ಕರೆಯುತಿದೆ ಕಣ್ಣ ಮಿಟುಕಿಸಿ
ಹೋಗು.. ದೂರ ಹೋಗು..
ಸೇರಿಸದಿರು.. ಕಣ್ಣಿಗೆ ಕಣ್ಣ
ನೀನೇನು ನಲ್ಲೆಯೇನು..?
ಬಿಗಿಹಿಡಿದ ಉಸಿರನು ಬಿಡಿಸೊಗೆದು ಉಸಿರಬೇಕಿದೆ ನನಗೆ..
ಆಳವಾಗಿ.. ನಿರಾಳವಾಗಿ.. ನಿರಾಳನಾಗಿ..
ಬದುಕುವುದಿದೆ ನನಗೆ ಇನ್ನೂ.. ಇನ್ನೂ..
ಮತ್ತೊಮ್ಮೆ ಮೊದಲಿಂದಾರಂಭಿಸಿದರೂ ಸರಿ..
ಬದುಕಬೇಕಿದೆ ನನಗೆ.. ಮತ್ತೂ.. ಮತ್ತೂ..

ಶಾಲೆಯ ಹಿಂದಿನ ಮರಳು ಜಾರು.. ಜಾರು..
ಢಿಶುಂ.. ಢಿಶುಂ.. ರೊಂಯ್.. ರೊಂಯ್..
ಕಾಲ ಗಾಯ ಮೈಯ ಗಾಯ
ಕೆಂಪೇ ಇಲ್ಲದ ರಕ್ತ
ಜಾಂಬಳಿ.. ಬಿಳಿ.. ನೀಲಿ.. ಅಲ್ಲಲ್ಲಿ..
ಕಪ್ಪು ಬಿಳುಪ ಕನಸ ನಿದ್ದೆ
ಜ್ವರದ ಮಂಪರಲ್ಲಿ ಬಂದ ಅವ್ವ ಕೇಳುವ ಪ್ರಶ್ನೆ
“ಏನಾತss.. ಯಪ್ಪಾ..?”
ನಾನವಳಿಗೆ ಅಪ್ಪನಾದದ್ದು ಯಾವಾಗ..?
ಮಗನಾದದ್ದು ಯಾವಾಗ..?
ಕಪ್ಪು ಬಿಳುಪ ಕನಸ ಅಂಚಿನಲಿ
ಜಾಂಬಳಿ.. ಬಿಳಿ.. ನೀಲಿ.. ಅಲ್ಲಲ್ಲಿ..

ನೆನಪಾದಗಲೆಲ್ಲ ನೀನು ನನಗೆ ಬೇಕು
ನೆನಪು ಮಾಸಿ ಬತ್ತಿದರೂ ಬೇಕೇ ಬೇಕು
ಸೊಗದ ಮಾತಲ್ಲ; ಜಗ ಯುಗದ ಮಾತಿದು
ನಿನ್ನ ಅಹಂಕಾರ ನಿನಗೆ ಮುಳುವು
ಪ್ರೀತಿ ಹೇಳೋದಲ್ಲ..
ತಿಳಿಯೋದೂ ಅಲ್ಲ ಬಿಟ್ಟುಬಿಡು

ಊರ ದಾರಿ ದೂರss
ಸೂರು ಹುಡುಕೋ ಭಾssರ
ಯಾವುದೀ ಸಾಗರ
ಯಾವುದೀ ದಡ
ಸೂಟ್ ಹಾಕಿಕೊಂಡು ಬೀಚ್ ಮೇಲೆ ಪರದಾಟ
ಸೆಖೆ.. ಸೆಖೆ.. ಅಬ್ಬಾ..
ಬೆವರಲಿ ಕುದ್ದು ಹಳಸುವ ದೇಹ ಒಳಗೆ
ನಿಧನಿಧಾನವಾಗಿ ಮುಗಿದುಬಿಡುವ ಬದುಕು
ಬೇಡ ಬೇಡ..
ನನ್ನ ಫೋಟೋ ಚೆನ್ನಾಗಿ ಬರೋಲ್ಲ
ಟಚ್ ಅಪ್ ಮಾಡಿದರೂ..
ಅಪ್ಪ ಮಾಡಿದ್ದು ಹೀಗೇ..

ಹೇಳು ಬ್ರಹ್ಮ.. ಹೇಳು..
ಸುತ್ತು ಬಳಸು ಯಾಕೆ..?
ಗೋಳು ಹೊಯ್ದದ್ದ್ಯಾಕೆ..?
ಹುಟ್ಟಿದ್ದು ಯಾಕೆ ನೀ..?
ಹುಟ್ಟಿಸಿದ್ದು ಯಾಕೆ ನೀ..?

‍ಲೇಖಕರು Avadhi

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: