ಸರೋಜ ಪ್ರಶಾಂತಸ್ವಾಮಿ
ಹಚ್ಚುವ ಹಣತೆಯದು ಕಿಚ್ಚಿಗಲ್ಲ
ಮೆಚ್ಚುಗೆಗೂ ಅಲ್ಲ…
ಕದಲಿದ ಮನಗಳ ಬೆಳಕಲಿ
ಒಂದುಗೂಡಿಸಿರೆಲ್ಲ…
ತೈಲವ ಕುಡಿದು,
ಬತ್ತಿಯ ಸೆಳೆದು
ಬೆಳಗಿದೆ ಜ್ಯೋತಿ
ಬದುಕುವ ರೀತಿ…
ಆತ್ಮವು ಹಡೆದು,
ದೇಹವ ನೊಣೆದು
ಬೆಳೆಯುವ ಕಾಂತಿ
ಜೀವನ್ಮುಕ್ತಿ…
ಸಂಧಿಸೋ ಅಂಧತೆಯ
ಹಿಂದಕೆ ಎಳೆದು,
ಬಂಧಿಸು ಬದುಕನು
ದೀಪವ ಹಿಡಿದು…
ಓ ಹಣತೆಯೇ….
ಜೀವ ಜ್ಯೋತಿಯ ಬೆಳಗು….
0 ಪ್ರತಿಕ್ರಿಯೆಗಳು