‘ಹಠಕೆ ಬಿದ್ದರೆ, ಎದ್ದು ನಿಂತರೆ ಯಾವ ಕೌರವ? ಯಾವ ದುಶ್ಯಾಸನ?’ – ತೇಜಸ್ವಿನಿ ಹೆಗಡೆ

‘ಸ್ತ್ರೀ’ ಎಂದರೆ ಅಷ್ಟೇ ಸಾಕೆ?

ತೇಜಸ್ವಿನಿ ಹೆಗಡೆ

ಚಿತ್ರ : ಸೌಮ್ಯ ಕಲ್ಯಾಣ್ ಕರ್

ಶಾಂತ ಸಾಗರದೊಳು ಸುನಾಮಿ, ಅಗ್ನಿಪರ್ವತದೊಳು ವಿಪ್ಲವ,

ಗುಂಡಗಿರೋ ಭೂಮಿ ಗುಡುಗಿ ಬಾಯ್ಬಿರಿದೇ ಪ್ರಳಯವಾಗಬೇಕಿಲ್ಲ!

ಮೃಗಕಿಂತ ಕೀಳಾಗಿ, ಅಲ್ಪ ಮಾನವೀಯತೆಯನೂ ಮರೆತು,

ನಾರಿಯ ಮೈ-ಮನದ ಮೇಲೆರಗುವ ನರನೊಂದೇ ಸಾಕಲ್ಲಾ!

.

ಹಠಕೆ ಬಿದ್ದರೆ, ಎದ್ದು ನಿಂತರೆ ಯಾವ ಕೌರವ? ಯಾವ ದುಶ್ಯಾಸನ?

ಮುಡಿಬಿಚ್ಚಬೇಕೆಂದಿಲ್ಲ, ಮುಚ್ಚಿರುವ ಮನದ ತೆರೆಯ ತೊರೆದರೆ,

ಶಿವೆಯ ಮೂರೆನಯ ಕಣ್ಣು ಉದ್ಭವ! ಪ್ರಾಣಿಯ ಪ್ರಾಣವೆಲ್ಲಾ ಹರಣ!

.

ಆತಂಕದಗೂಡು ಕೆಡವಲೆಷ್ಟು ತಡ?

ಮುಳುಗಿರುವವಗೆ ಚಳಿಯದೇನು ಭಯ?

ಕೊಡವಿದರೆ ಸಾಕೊಮ್ಮೆ ಇಳೆ, ಭೂಭಾರಗಳೆಲ್ಲಾ ಶೂನ್ಯ!

.

ದುರ್ಬಲತೆಯ ದುರ್ಬಳಕೆಗೆ, ಹಿಡಿಯಬೇಕಿದೆ ತ್ರಿಶೂಲ, ಶಲಾಕೆ…

ಸಬಲ ಮನವೊಂದಿದ್ದೊಡೆ, ಮೆಟ್ಟಬಲ್ಲೆವು ಕ್ರಿಮಿಯ ಕೆಡವಿ ನೂಕಿ.

ಮಲಗಿರುವ ಮಾನವೀಯತೆಗೊಮ್ಮೆ ಕಲಿಸಬೇಕಿದೆ ಪಾಠ,

ದುರ್ಗೆ, ಕಾಳಿ, ಮಾರಮ್ಮರನು ನೆನೆದು ಹಾರಿಸು ನೀ ವಿಜಯದ ಬಾವುಟ.

 

‍ಲೇಖಕರು G

December 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. bharathi

    ಒಪ್ಪಿದೆ ಒಪ್ಪಿದೆ ನಿಮ್ಮ ಮಾತು … ಕವನ ಚೆನ್ನಾಗಿದೆ

    ಪ್ರತಿಕ್ರಿಯೆ
  2. Anuradha.rao

    ಒಪ್ಪಿದೆ .ಸಬಲ ಮನವೊಂದಿದ್ದರೆ …ನಿಜಕ್ಕೂ Inspiring…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: