‘ಸ್ತ್ರೀ’ ಎಂದರೆ ಅಷ್ಟೇ ಸಾಕೆ?
ತೇಜಸ್ವಿನಿ ಹೆಗಡೆ
ಚಿತ್ರ : ಸೌಮ್ಯ ಕಲ್ಯಾಣ್ ಕರ್
ಶಾಂತ ಸಾಗರದೊಳು ಸುನಾಮಿ, ಅಗ್ನಿಪರ್ವತದೊಳು ವಿಪ್ಲವ,
ಗುಂಡಗಿರೋ ಭೂಮಿ ಗುಡುಗಿ ಬಾಯ್ಬಿರಿದೇ ಪ್ರಳಯವಾಗಬೇಕಿಲ್ಲ!
ಮೃಗಕಿಂತ ಕೀಳಾಗಿ, ಅಲ್ಪ ಮಾನವೀಯತೆಯನೂ ಮರೆತು,
ನಾರಿಯ ಮೈ-ಮನದ ಮೇಲೆರಗುವ ನರನೊಂದೇ ಸಾಕಲ್ಲಾ!
.
ಹಠಕೆ ಬಿದ್ದರೆ, ಎದ್ದು ನಿಂತರೆ ಯಾವ ಕೌರವ? ಯಾವ ದುಶ್ಯಾಸನ?
ಮುಡಿಬಿಚ್ಚಬೇಕೆಂದಿಲ್ಲ, ಮುಚ್ಚಿರುವ ಮನದ ತೆರೆಯ ತೊರೆದರೆ,
ಶಿವೆಯ ಮೂರೆನಯ ಕಣ್ಣು ಉದ್ಭವ! ಪ್ರಾಣಿಯ ಪ್ರಾಣವೆಲ್ಲಾ ಹರಣ!
.
ಆತಂಕದಗೂಡು ಕೆಡವಲೆಷ್ಟು ತಡ?
ಮುಳುಗಿರುವವಗೆ ಚಳಿಯದೇನು ಭಯ?
ಕೊಡವಿದರೆ ಸಾಕೊಮ್ಮೆ ಇಳೆ, ಭೂಭಾರಗಳೆಲ್ಲಾ ಶೂನ್ಯ!
.
ದುರ್ಬಲತೆಯ ದುರ್ಬಳಕೆಗೆ, ಹಿಡಿಯಬೇಕಿದೆ ತ್ರಿಶೂಲ, ಶಲಾಕೆ…
ಸಬಲ ಮನವೊಂದಿದ್ದೊಡೆ, ಮೆಟ್ಟಬಲ್ಲೆವು ಕ್ರಿಮಿಯ ಕೆಡವಿ ನೂಕಿ.
ಮಲಗಿರುವ ಮಾನವೀಯತೆಗೊಮ್ಮೆ ಕಲಿಸಬೇಕಿದೆ ಪಾಠ,
ದುರ್ಗೆ, ಕಾಳಿ, ಮಾರಮ್ಮರನು ನೆನೆದು ಹಾರಿಸು ನೀ ವಿಜಯದ ಬಾವುಟ.
ಒಪ್ಪಿದೆ ಒಪ್ಪಿದೆ ನಿಮ್ಮ ಮಾತು … ಕವನ ಚೆನ್ನಾಗಿದೆ
Yes, yes n yes……really inspiring Tejaswini…..
ಭಲೇ ಹುಡುಗೀ.. Tight Hug..
tumba chennada kavana!
ಒಪ್ಪಿದೆ .ಸಬಲ ಮನವೊಂದಿದ್ದರೆ …ನಿಜಕ್ಕೂ Inspiring…
wonderful poem tejaswini! u said it n well!
kavana chennagide Tejaswini…