ಸವಿತಾ ಎಸ್ ಪಿ
ದಡವು ನೀರ ಹರಿವ
ನೋಡಿ ನಿಟ್ಟುಸಿರಾಗುವುದು
ಬಲು ಸಹಜ
ತಾನು ಬಳಸಿದ ಪಾತ್ರಗಳಂತೆ
ಬದಲಾಗುವುದು
ನದಿಯ ಗುಣವದು ನೈಜ
ಅದೆಷ್ಟು ಮಾತುಗಳನು
ಒಂದು ಮೌನ ನುಂಗಿ ಹಾಕಿ
ನೀಡುವುದಿಲ್ಲವೇ ಸಜ
ಇರಲಿರಲಿ ಬಿಡಿಸದೆ
ಬಿಟ್ಟ ಮೊಗ್ಗುಗಳು
ಸಂಜೆಯ ತಂಪಿಗೆ, ಕಂಪಿಗೆ
ಆಡದೆ ಉಳಿದ ಮೌನದ
ಪಿಸುಮಾತುಗಳು
ಸಂಧ್ಯಾಕಾಲದ ಮೆಲುಕಿಗೆ..!
‘ಅವಧಿ’ ಸಮಕಾಲೀನ ತುಡಿತಗಳಿಗೆ ವಿಭಿನ್ನ ಆೋಚನೆಗಳಿಗೆ ದನಿಯಾತ್ತಿರುವುದು ಶ್ಲಾಘನೀಯ ಬೆಳವಣಿಗೆ. ಹೊಸತನದ ಈ ಹಸಿರು ಮತ್ತಷ್ಟು ಮೆೈದುಂಬಲಿ.
ಡಾ. ನಿೀ. ಗುೂ.ರಮೇಶ್
ಧನ್ಯವಾದಗಳು ಸರ್…