ಸೆಳೆತ…

ಸುಪ್ರೀತಾ ಶೆಟ್ಟಿ ಗುಬ್ಬಚ್ಚಿ

ಹುಟ್ಟಿದಂದು ಅತ್ತವಳ ಎದೆಗೊತ್ತಿ ಹಿಡಿದಾಗ ಆ ಮಿಡಿತವೇ ನನಗೆ ಜೋ ಲಾಲಿಯಾಗಿತ್ತು,
ಹಸಿವಾಗಿದ್ದು ನಾನರಿವ ಮುನ್ನ ಅಮೃತವುಣಿಸುವ ಆಂತರ್ಯ ನಿನಗಷ್ಟೇ ಗೊತ್ತು,

ಅಂಬೆಗಾಲಿಟ್ಟು ಹೊರಟಾಗ ಗೊತ್ತುಗುರಿಯಿಲ್ಲದ ಪಯಣ ನನ್ನದು,
ಹತ್ತು ಹೆಜ್ಜೆ ಇಡುವ ಮೊದಲೆ ಹೊತ್ತು ತಿರುಗಿದ್ದರು ತಂದೆ ಕಾಲು ಸವೆದಿತೆಂದು,

ಓಡುತಲಿರುವೆ ಬಹುದೂರದವರೆಗೂ ವಾತ್ಸಲ್ಯದ ಕರೆ ಕೇಳಿಸಿದರೂ ತಿರುಗುವ ಮನಸಿಲ್ಲ,
ಕಟ್ಟಿ ಕೊಟ್ಟ ಕನಸುಗಳಿಗೆ ಜೀವ ತುಂಬುವ ಬಯಕೆ ಕೆಟ್ಟ ಹಠವೋ, ದಿಟ್ಟತನವೋ ತಿಳಿಯುತಿಲ್ಲ,

ಸೋತುಬಿಡುವೆ ಒಮ್ಮೊಮ್ಮೆ ಬಂದು ಬಿಡಲೇ ಅಮೃತವಿತ್ತ ಮಡಿಲಿಗೆ,
ಜೊತೆಯಾಗಲೇ ಹೊತ್ತ ಆ ಹೆಗಲಿಗೆ, ಮೊದಲಿನಂತೆ ಮಗುವಾಗಿ,

ಮತ್ತೆ ಭಾವನೆಗಳ ಹೊಯ್ದಾಟ ಹೋಗಲೇಬೇಕು ದೂರ ತೀರಕೆ,
ತಾಯೆನಿಸಿದ ಮುದ್ದು ಮಗಳಿಗಾಗಿ, ನೋವಲ್ಲೂ ನಗುವ ಸಂಗಾತಿಗಾಗಿ.

‍ಲೇಖಕರು Admin

October 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anil chatnalli

    ಕಾಶಿಗೆ ಹೋಗಲಿಕೆ ಏಸೊಂದು ದಿನಬೇಕು
    ತಾಸೊತ್ತಿನ ಹಾದಿ ತೌರೂರ ಮನೆಯಲ್ಲಿ
    ಕಾಶಿ ಕುಂತವಳೆ ಹಡೆದವ್ವ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: