ಸೂರ್ಯಕೀರ್ತಿ ಹೊಸ ಕವಿತೆ- ಗಾಂಧಾರಿ ಕಟ್ಟಿದ ಬಟ್ಟೆ!

ಸೂರ್ಯಕೀರ್ತಿ

ಅಂದು ರಾತ್ರಿ ಧೃತರಾಷ್ಟ್ರ ದಿಢೀರನೆ
ಬಂದು ಹಾಸಿಗೆಯ ಮೇಲೆ ಕುಳಿತಾಗ
ಅವನ ಅಂಧದ ಕಣ್ಣುಗಳೊಮ್ಮೆ
ಕುಡಿನೋಟಗಳ‌ ಬೀರಿ ಅವನಿಗೆ‌
ನಾನೇ ನಾನೇ ಕಣ್ಣಾಗಬೇಕೆಂದು ಅಂದುಕೊಂಡಿದೆ!

ಅವನ ಕುರುಡಿಗೆ ಬೆಳಕಿನ ಹೂವಾಗಿ
ಅರಳಬೇಕೆಂದು ಅವನ ಬೆರಳುಗಳ
ಮುಟ್ಟಿದೆ, ಅಲ್ಲಲ್ಲಿ ಆಕಾಶದ ಕಡೆ
ತಿರುಗಿ ಒದ್ದಾಡುವಾಗ ಅವನಿಗೆ
ನನ್ನ‌ ದೃಷ್ಟಿಯನ್ನೆ ಕೊಡಬೇಕೆಂದು ಹಪಹಪಿಸಿದೆ!

ಆ ಶಯನಗೃಹದಲ್ಲಿ ಅವನ
ಜೊತೆ ಅವನು ಕಾಣಲಾಗದನ್ನು
ಕಂಡಲಾಗದನ್ನು ನನ್ನ ಕಣ್ಣುಗಳಿಂದ
ನೋಡಿಸಬೇಕೆಂದಿದ್ದೆ!
ಅಂದು ಅವನಿಗೆ ಇದರ ಬಗ್ಗೆ
ಎಚ್ಚರವೇ ಇರಲಿಲ್ಲ!
ರಾಮರಸವ ಕುಡಿದು ಉನ್ಮಾದದ ಸ್ಥಿತಿಯಲ್ಲಿದ್ದ!

ತಡವಿದ, ಸುತ್ತಲೂ ತಿರುಗಿದ
ಕೈಗಳ ಮುಂದೆ ನೀಡಿ ‘ಲೇ, ಲೆಯ್ ಇವ್ಳೇ ,
ಥೂ, ಯಾರ್ಲೇ’ ಎಂದೆಲ್ಲ ಅರಚಿದ.
ಅವನ‌ ನೋಡಿ ದಾರಿದೀಪವಾಗಬೇಕೆಂದುಕೊಂಡಿದ್ದ
ನನಗೆ ಕ್ಷಣಾರ್ಧದಲ್ಲಿ ಕಸಿವಿಸಿಗೊಂಡೆ‌.

ಮಹಾರಾಜ ಎನ್ನುವಷ್ಡರಲ್ಲಿಯೇ
ಕಪ್ಪು ಬಟ್ಟೆಯ ನನ್ನ ಕಣ್ಣುಗಳ ‌ಮುಂದೆ ತಂದ
‘ಕಟ್ಟಿಕೋ‌ ಇಧೋ! ಲೋಕದ ಪತಿಗೆ ಸಮ’
ಎಂದು ಗುಡುಗಿದ.
ಒಂದೆರಡುಹೆಜ್ಜೆಗಳ‌ ಇಟ್ಟು ‘ಗಂಡ ನೋಡದ ಈ ಪ್ರಪಂಚ ಸತಿಗೂ ಬೇಡ’ ಎನ್ನುತ್ತಲೇ ಆಕಾಶಕ್ಕೆ
ಪರದೆಯ ಕಟ್ಟಿದ.
ಅಂದಿನಿಂದ ಇಂದಿನವರೆಗೂ ಆ ಪರದೆ
ಮಹಾಪತಿವ್ರತಿಯ ಸ್ಥಾನದಿಂದ ಇಳಿಯಲೇ ಇಲ್ಲ!
ಗಾಂಧಾರಿ‌ ಅವನ ಕಣ್ಣುಗಳಿಗೆ
ಕುರುಡಾದಳು, ಕತ್ತಲೇ ಪ್ರಪಂಚದ
ರಾಣಿಯಾದಳು!
ಕುರುಡು ರಾಜನ ರಾಣಿಯಾಗಿ
ಸಾಮ್ರಾಜ್ಯವಾಳಿದಳು, ಯಾರೂ ನೋಡಲಾಗದ
ರಾಜ್ಯಕ್ಕೆ!

‍ಲೇಖಕರು Admin

November 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: