ಸುನೀತಾ ಬೆಟ್ಕೇರೂರ ಕವಿತೆ- ನಿವೇದನೆ

ಸುನೀತಾ ಬೆಟ್ಕೇರೂರ

ಪೃಥಿವಿವಲ್ಲಭನವನು ಅಪೂರ್ವ
ಕ್ಷಣದಲೊಮ್ಮೆ
ಸ್ಖಲಿಸಿ ವೀರ್ಯವನಿಲ್ಲಿ
ಹೊಕುಳ ಬಳ್ಳಿಯಲರೊಂದನ
ಅರಳಿಸಿಬಿಟ್ಟ

ಉಸಿರ ನೀಡಲು
ಹಸಿರ ಸಮೂಹವನಿಟ್ಟ
ದಣಿವ ತಣಿಸಲು
ಜಲನಿಧಿಯ ಹರಿಬಿಟ್ಟ
ತನ್ನುಸಿರ ಬೆಂಕಿತಾಗದಂತೆ
ವಾಯುವ್ಯೂಹವನಿಟ್ಟ
ಒಡಲಾಳದಲಿ
ಸಿರಿಸಂಪದವನಡಗಿಸಿಟ್ಟ
ವಸುಂಧರಾ ಎಂದವಳ
ಮೈದಡವಿಬಿಟ್ಟಾ….!

ನಿನ್ನಜ್ಜ, ಮುತ್ತಜ್ಜ, ಪಿತ್ತಜ್ಜರ
ಹಾಡಿದರ
‘ಎಲ್ಲಿ ಭೂರಮೆ….’
ಎಂದಂಗನೆಯ ಫಲಭಾಗಿನೈ
ಸಿರಿಯಕಂಡು.
ಮುತ್ತೈದೆ ತಾಯಗೆ
ನಮಿಸಿದರ
ತಾಯೊಡಲ ಸ್ವರ್ಗವದೆಂದೂ.

ವರಪುತ್ರ
ನೀಗೈವುದೇನಿಂದು
ತಾಯ್ ಬಸಿರ ಬಗೆವುದೆ…?
ಹಸಿರೊಡಲ ಬಯಲಾಗಿಸುವುದೆ….?
ಜಲನಿಧಿಯ ಹೊಲೆಯಾಗಿಸುವುದೆ…?
ನಿರ್ಮಲವ ನಿರ್ನಾಮಗೊಳಿಸುವುದೆ…?
ಇಲ್ಲಾ…,
ಹಬ್ಬಲಿ, ಸುಖಿಸಲಿ ನಿನ್ನದೇ
ಸಂತತಿ ತಿರುತಿರುಗಿ
ತಾಯೊಡಲೊಳ ಎನುತಾ
ಜತನದಿ ಪೊರೆವುದೆ…?

‍ಲೇಖಕರು Admin

July 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: