ಸುಡುಗಾಡಲ್ಲಿ ಸುಳಿದಾಡುವ ತಂಗಾಳಿ…

ಸುರೇಶ ಎಲ್ ರಾಜಮಾನೆ

ಜಾರಿಹೋಗುವ ಕಣ್ಣ ಹನಿಗಳು
ಹೆಪ್ಪುಗಟ್ಟಿವೆ ಕಣ್ಣೊಳಗೆ
ಮುಪ್ಪಿನ ಭಯಕ್ಕಲ್ಲ
ಉಪ್ಪಿನ ಋಣಕ್ಕೆ ಮತ್ತದರ ಗುಣಕ್ಕೆ
ಹೊಂದಿಕೊಳ್ಳಲಾಗದೆ..

ಮುಳ್ಳಿನ ಮೇಲೆ ಹೆಜ್ಜೆಯಿಟ್ಟು
ನಗುವಿನ ಜೋಪಡಿ ಕಟ್ಟಿಕೊಳ್ಳಲು
ತುಂಬಾ ಕಷ್ಟವಾಗುತ್ತಿದ್ದರೂ
ನಗುವ ಮನಸ್ಸಾಗಿದ್ದರಿಂದ
ನೋವು ಸಾವಿಗೆ ಶರಣಾಗಿದೆ..

ಹೆಚ್ಚುಕಡಿಮೆ ಎಲ್ಲರ ಬದುಕೂ
ಹೀಗೆ ಇರುವಾಗ ಅವರೆಲ್ಲರಿಗಿಂತ
ಹೆಚ್ಚೆಂದರೆ ನಾನು ಗಂಟಲು ಕುಯ್ದುಕೊಂಡು
ಸ್ವರಗಳ ಹೊರಡಿಸೊ ಶರತ್ತನ್ನು
ತೆಗೆದುಕೊಂಡಿದ್ದೇನೆ ಅಷ್ಟೇ..

ಗೋಡೆಗೆ ಹೊಡೆಯುವ ಮೊಳೆಯನ್ನು
ಎದೆಗೂಡಿಗೆ ಹೊಡೆದು
ಮತ್ತದೆ ಹಳೆಯ ಪ್ರೇಮನ್ನು
ನೇತುಹಾಕುತ್ತಿದ್ದಾರೆ
ಅಲ್ಲಿ ಭಾವವೂ ಇಲ್ಲ ಭಾವಚಿತ್ರವೂ ಇಲ್ಲ..

ವಾಸ್ತವದ ಕಣ್ಣುಕಟ್ಟಿ
ಸಾವನ್ನು ಸಂತೆಯೊಳಗೆ ಆಡಲು ಬಿಟ್ಟು
ವ್ಯಾಪಾರಕ್ಕಿಳಿದಿದ್ದಾರೆ
ಖರಿದಿಸಲು ಮತ್ತದೆ ಕಣ್ಣಾಮುಚ್ಚಾಲೆ
ಆಟವನ್ನೆ ಆಡುವ ಹುನ್ನಾರ..

ಸರಿದುಹೋಗಲಿ ಈ ಸಂಚಿನ
ಎದೆಯಲಿ ಮಂಚ ಹತ್ತಿ ಮಲಗಿರುವ
ದ್ವೇಷ, ಕಪಟ, ಸಂಶಯಗಳು
ಆಸೆಗಳಿಗೆ ಭಾಷೆ ಬಾರದಿದ್ದರೂ
ಭಾವದ ಅರಿವಿರುತ್ತದೆ..

ಜಗವಿದು ಜೀವದ ಜೀವನದ ಮೊಗದಲ್ಲಿನ
ನಗೆಯನ್ನು ಬಗೆ ಬಗೆಯಾಗಿ ಬಳಸಿಕೊಂಡು
ಯುಗಯುಗಗಳನ್ನೆ ಕೊಲ್ಲುವ ಕ್ರೂರಿ
ಲಗುಬಗೆಯ ನಡಿಗೆಯಲಿ
ಎಡವಲು ಅಡ್ಡಗಾಲು ಕೂಡಾ..

‍ಲೇಖಕರು Admin

July 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. prathibha nandakumar

    “ಗೋಡೆಗೆ ಹೊಡೆಯುವ ಮೊಳೆಯನ್ನು
    ಎದೆಗೂಡಿಗೆ ಹೊಡೆದು”

    ಚೆನ್ನಾಗಿದೆ ಕವನ

    ಪ್ರತಿಕ್ರಿಯೆ
    • Suresh

      ಥ್ಯಾಂಕ್ಯು ಸೋ ಮಚ್ ಮೆಡಮ್ ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ.

      ಪ್ರತಿಕ್ರಿಯೆ
  2. Jahan Ara Kolur

    ದುಃಖದ ನಾನಾ ರೂಪಗಳಿಗೆ ನಗುವೊಂದೇ ಮುಖವಾಗಿದೆ.
    ದುಃಖದ ಕ್ರೂರತನ ಕೊನೆಯಾಗಿ ಜಗದಲ್ಲಿ ಮನದಲ್ಲಿ ಶಾಂತಿ ನೆಲೆಸಲಿ

    ಪ್ರತಿಕ್ರಿಯೆ
    • Suresh

      ಥ್ಯಾಂಕ್ಯು ತಂಗಾಳಿಯನ್ನು ಓದಿ ಆಶ್ವಾಧಿಸಿದ್ದಕ್ಕೆ ❤

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: