‘ಕವಿತಾ ಪ್ರಕಾಶನ’ ಪ್ರಕಟಿಸಿದ ಸುಚಿತ್ರಾ ಹೆಗಡೆ ಅವರ ಪ್ರವಾಸ ಕಥನ ‘ಜಗವ ಸುತ್ತುವ ಮಾಯೆ’ಯನ್ನು ಹಿರಿಯ ಪತ್ರಕರ್ತ, ಕನ್ನಡಪ್ರಭ ಪುರವಣಿಗಳ ಸಂಪಾದಕ ಜೋಗಿ ಅವರು ಬಿಡುಗಡೆ ಮಾಡಿದರು.
ಮೈಸೂರಿನ ವಿಜ್ಞಾನ ಭವನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಪುಸ್ತಕ ಕುರಿತು ಮಾತನಾಡಿದರು. ಲೇಖಕಿ ಸುಚಿತ್ರಾ ಹೆಗಡೆ ತಮ್ಮ ಪ್ರವಾಸಗಳ ಹಿಂದಿನ ಅದಮ್ಯ ಉತ್ಸಾಹವನ್ನು ಬಣ್ಣಿಸಿದರು.
ಮೈಸೂರು ವಿವಿ ಕುಲಪತಿ ಪ್ರೊ ಜಿ ಹೇಮಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಕಾಶಕ ಮತ್ತು ಹಿರಿಯ ಪತ್ರಕರ್ತ ಗಣೇಶ್ ಅಮೀನಗಡ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ
0 ಪ್ರತಿಕ್ರಿಯೆಗಳು