– ಶಿವರಾಜ ಅರಳಿ
ಪ್ರಾಥ೯ನೆ
ಸಾವು ತುದಿಯಲಿ ಕೂತಿದೆ
ಹೋಗುತ್ತಿದ್ದೇನೆ
ಮೋಡಗಳ ಇರಿದು
ನಕ್ಷತ್ರಗಳ ದಾಟಿ.
ಎದೆ ಕಪ್ಪುಗಟ್ಟಿದೆ
ಇಷ್ಟು ದೂರ
ಹೊತ್ತು ನಡೆದ ಬದುಕು
ಮೌನದಲಿ ಬಿಕ್ಕುತ್ತಿದೆ
ಉಸಿರು ಕೈಯಲಿಲ್ಲ
ಪಾಪ.! ಅಲಗಿನ ನೆರಳಲಿ
ಜೋತು ಬಿದ್ದಿದೆ
ದುಃಖಿಸದಿರು
ನಿನ್ನ ಹಾದಿ ದೂರಿದೆ
ನೇವರಿಸಿ ಸಂತೈಸುತ್ತೇನೆ
ಮತ್ತೆ-ಮತ್ತೆ.
ಕಣ್ಣಿನೇರಕೆ ಕತ್ತಲು ಚಾಚಿ
ಹಮ್ಮಿನಲಿ ಎರಗುತ್ತದೆ
ಯೋಚಿಸು.
ತೋಳ ತೆಕ್ಕೆಯಲಿ
ಕಾದ ಎದೆಯಲಿ
ತಲೆಯೊರಗಬೇಡ;ಸಾಕು
ಯಾರೂ ನಮ್ಮವರಲ್ಲ
ಒಂದುವೇಳೆ ನನ್ನೊಟ್ಟಿಗೆ
ಮಾತನಾಡಬೇಕೆನಿಸಿದರೆ
ಕುಗ್ಗದಿರು;ಸಂವಹನಿಸುತ್ತೇನೆ
ಆತ್ಮದೊಟ್ಟಿಗೆ
ನನಗೂ-ನಿನಗೂ ನಂಟಿದೆ
ಪ್ರಾಥಿ೯ಸುತ್ತೇನೆ
ಸಾವಿನ ಕೋಣೆಯಲಿ ಕೂತು
ನಿನಗಾಗಿ
ನಿನ್ನ ಸೋತ ನೆರಳಿಗಾಗಿ.
ಕ್ಷಮಿಸು ಕಂದ
ಅಧ೯ ದಾರಿಯಲ್ಲಿ
ಬೆರಳ ಕಳಚಿ ಸಾಗಿದ್ದಕ್ಕೆ…!!






0 Comments