ಸಾವಿನ ಮನೆ ಕೊರೋನಾ

ಲಕ್ಷ್ಮಿ ಕೆ ಬಿ

ತಾಯಿ ಹಕ್ಕಿಯೊಂದು ಅಳುತಿದೆ
ಮರಿಯ ಜೀವ ಹಾರಿ ಹೋಯಿತೆಂದು
ಮರಿಯೊಂದು ಚಡಪಡಿಸುತಿದೆ
ವಾತ್ಸಲ್ಯದ ತಾಯಿ ಏಕೆ ಬಿಟ್ಟು ಹೋದಳೆಂದು?

ಒಲವ ಜೋಡಿಹಕ್ಕಿಗಳು ಕನವರಿಸುತಿವೆ
ಅನುರಾಗ ಕಣ್ಣೀರ ಕಡಲಾಯಿತೆಂದು
ಜೀವ ಜಡವಾಯಿತು ನೊಂದು
ತನ್ನೆಲ್ಲಾ ಬಳಗವನು ಕಳೆದುಕೊಂಡು

ಪ್ರಕೃತಿಯಿಂದು ಸಾವಿನ ಮನೆಯಾಗಿದೆ
ಉರಿಯುತಿವೆ ಮನಸ್ಸುಗಳು
ಉರಿಯುತ್ತಿರುವ ಹಚ್ಚಹಸಿರಾದ
ಉಸಿರುಗಳ ಕಂಡು

ಕಾಲವಾದವರೂ ಗೋಳಿಡುತ್ತಿದ್ದಾರೆ
ಸಂಸ್ಕಾರವಿಲ್ಲದೆ ಹೊರಟ ಆತ್ಮಕ್ಕೆ ಶಾಂತಿ ಇಲ್ಲವೆಂದು
ಕಟ್ಟಿದ ಬಂಗಲೆಗಳಲ್ಲಿ ಇರಲಿ
ಸ್ಮಶಾನದಲ್ಲೂ ವಿಶ್ರಮಿಸಲು ಜಾಗ ವಿಲ್ಲವೆಂದು

ಕಾಲವಾಯಿತು ಕಾಲ, ಕಾಲನ ಕೈಯ ಮೀರಿ
ಕಾಳಸಂತೆಯಲ್ಲಿ ಗಾಳಿ, ಬೆಳಕು, ನೀರು
ಮಾನವತೆಯ ಮರೆತ ಮನುಜನವ
ಮೌಲ್ಯಗಳ ಗಾಳಿಗೆ ತೂರಿ
ಕರಾಳ ರಾತ್ರಿಯಲ್ಲಿ ಕಾಡ ಹಾದಿಯಲ್ಲಿ ಸಾಗುತಿಹ ಬದುಕು

ಕತ್ತಲ ಬೆನ್ನಹಿಂದೆ ಬೆಳಕಿನ ಪರದಾಟ
ಭಯ, ಆತಂಕಗಳ ಹಿಂದೆ ಆತ್ಮವಿಶ್ವಾಸದ ಸೆಣಸಾಟ
ನೆಮ್ಮದಿಯ ನಾಳೆಗೆ ಭರವಸೆಯ ಬಾಳಿಗೆ ಬೆಳಕ ತೋರೋ ರವಿ
ಗಾಢಾಂಧಕಾರದಿಂದ ಹೊರಬರಲಿ ಈ ಭುವಿ

‍ಲೇಖಕರು Avadhi

May 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: