ಸಾಗರ ಸೇರುವ ಮುನ್ನ…

ಮೂಲ: ಖಲೀಲ್ ಗಿಬ್ರಾನ್

ಕನ್ನಡಕ್ಕೆ: ಎಂ ಎಸ್ ವಿದ್ಯಾ

‘ನದಿ’ಯೂ ಭಯದಿಂದ ಕಂಪಿಸುತ್ತಾಳೆ
ಬೆಟ್ಟದ ತುದಿಯಿಂದ ತಾನು ಹರಿದುಬಂದ ಹಾದಿಯ ಮೇಲೆ ಕಣ್ಣು ಹಾಯಿಸುತ್ತಾಳೆ
ಸುರುಳಿ ಸುರುಳಿಯಾಗಿರುವ ನೀಳ ದಾರಿ,
ಕಾಡು ಮತ್ತು ಹಳ್ಳಿಗಳನ್ನು ಬಳಸುತ್ತಾ ಹರಿದ ಪಾತ್ರ.

ಅವಳ ಮುಂದೆ…
ಅಖಂಡ ಸಾಗರ
ಅದರಲ್ಲಿ ಹೊಗುವುದು ಎಂದರೆ
ತನ್ನ ಅಸ್ತಿತ್ವವನ್ನೇ ಮರೆತು ಕರಗಿಹೋಗುವುದು.
ಆದರೆ ಗತ್ಯಂತರವಿಲ್ಲ
ತಾನು ಹಿಂದಕ್ಕೆ ಹರಿಯಲಾಗದು.

ಹೊರಳಿ ಮರಳುವುದು ಇಲ್ಲಿಲ್ಲ,
ಭೂತಕ್ಕೆ ಹೋಗುವುದು ಅಸಾಧ್ಯ,
ತಾನು ಧೈರ್ಯದಿಂದ ಮುನ್ನುಗ್ಗಲೇಬೇಕು,
ಸಾಗರವನ್ನು ಸೇರಲೇಬೇಕು.

ಭಯ ಮರೆಯಾಗುವುದು ಆಗಲೇ,
‘ನದಿ’ಗೆ ಅರಿವಾಗುವುದು ಆಗಲೇ,
ತಾನು ಸಾಗರದಲ್ಲಿ ಕಳೆದುಹೋಗುವುದಿಲ್ಲ,
ತಾನೇ ಸಾಗರವಾಗುತ್ತೇನೆ ಎಂದು!!

‍ಲೇಖಕರು Avadhi

June 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಕಿರಣ್ ಭಟ್

    ತುಂಬ ಒಳ್ಳೆಯ ಅನುವಾದ. ಅಭಿನಂದನೆಗಳು.

    ಪ್ರತಿಕ್ರಿಯೆ
  2. ನಾ.ದಾಮೋದರ ಶೆಟ್ಟಿ

    ಸರಳ, ಸುಂದರ ಅನುವಾದ. ಸಾರವತ್ತಾದ ಕವನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: