ಸಿದ್ಧನಗೌಡ ಪಾಟೀಲ್
“ಭೂಮಿಯ ಮಡಿಲಲ್ಲಿ ವಿಶಾಲವಾಗಿ
ಮಲಗಿದ್ದಾಳೆ ಸಾಗರಿ,
ಭೂಮಿಗೊಂದು ನಮನ ಹೇಳಲು
ತೆರೆಗಳನ್ನು ಕಳಿಸುತ್ತಾಳೆ,
ತೆರೆಗಳೋ ಆಡುತ್ತ , ಕುಣಿಯುತ್ತ ಬಂದು
ಭೂಮಿಗೊಂದು ಮುತ್ತು ಕೊಟ್ಟು
ನಮಿಸಿ ಹಿಂದಿರುಗುತ್ತವೆ.
ಸುನಾಮಿಯಾಗುತ್ತದೆ.
ಸಾಗರಿಯ ರಾಯಭಾರಿಯಾಗಿ
ಭೂಮಿಗೆ ಬರುವ ಸುನಾಮಿ
ಮನುಷ್ಯ ನಿರ್ಮಿತ ಅಸಮಾನತೆಯ ಕೋಟೆಯನು
ನೆಲಸಮ ಮಾಡಿ ಹಿಂತಿರುಗುತ್ತದೆ.
ಭೂಮಿಯನ್ನು ಪ್ರೀತಿಸುವುದೆಂದರೆ
ಇದೇ ಅಲ್ಲವೆ.”
| ಕೇರಳದ ಕೊಲ್ಲಮ್ ನ ಕಡಲ ತೀರದಲ್ಲಿ ಕುಳಿತಾಗ ಅನಿಸಿದ್ದು |
ಸುಂದರ ಕಲ್ಪನೆ
ಸುಂದರ ಕಲ್ಪನೆಯ ಜೊತೆಗೆ ಗೌಡರ ಸಾಮಾಜಿಕ ಸಮಾನತೆಯ ಸಂದೇಶ ಸಾಗರಿಯ ತೆರೆಗಳ ಮುಖಾಂತರ.. ಧನ್ಯವಾದಗಳು ಸಿದ್ಧನಗೌಡ ಸರ್.