ಸವಿರಾಜ್ ಆನಂದೂರು
ಗಾಂಧಿ ನಮ್ಮ ಕನಸಾದರೆ
ಅಂಬೇಡ್ಕರ್: ಎಚ್ಚರ
ಬೋಧಿವೃಕ್ಷವೆಮಗೆ ನೆರಳು
ಬೆಳಕದೋ ಬಸವೇಶ್ವರ!
ಸಂಕವ್ವೆಯ ಕುಲವು ನಾವು
ಕಲ್ಯಾಣದ ನೆಲವು ನಾವು
ಒಡಲಾಳದ ಬೆಂಕಿ ಕಾವು
ಲಂಕೇಶರ ಹತ್ತು ತಲೆ.
ಫುಲೆಯವ್ವನ ಕರುಳ ಬಳ್ಳಿ
ಹಲಗಲಿಯ ಕ್ರಾಂತಿ ಕೊಳ್ಳಿ
ಶಾಸನಗಳ ಕಡಿದು ಚೆಲ್ಲಿ-
ನಂಗೇಲಿಯ ಸಿಡಿದ ಮೊಲೆ.
ಶಾಂತವೇರಿ ಬೆಳೆದ ಬೆಳೆ
ಕನಕದಾಸ ತೊಳೆದ ಕೊಳೆ
ಹಾಜಬ್ಬರು ಸುಲಿದ ತೊಳೆ
ಗುರುವು ನಮಗೆ ಲೋಹಿಯಾ.
ಮಾತಂಗಿಯ ತುಂಬು ಮಡಿಲು
ಶಿಶುನಾಳದ ಭಂಗಿ ಸುಡಲು
ಕವಿಶೈಲದ ನೀಲಿ ಮುಗಿಲು
ತೇಜಸ್ವಿ ನಮ್ಮ ವಿಸ್ಮಯ.
0 ಪ್ರತಿಕ್ರಿಯೆಗಳು