ಸತ್ಯಬೋಧ ಜೋಶಿ ಹೊಸ ಕವಿತೆ- ಕಹಿ (ಹೂವಿನ) ಸ್ವಗತ

ಸತ್ಯಬೋಧ ಜೋಶಿ

ಬೃಂಗದೂರಿಗೆ  ನನ್ನ ಮಸುಕು ರಂಗನೇ ತೋರಿ
ಕರೆದು ತಾರೆಯಾ ಗೆಳತಿ ಹೊತ್ತು ಮೀರುತಿದೆ
ಬಾಡಿ ಮರಳುವ ಮುನ್ನ ತಿರುಳುಗಟ್ಟುವ ಆಸೆ
ಕಹಿಯೇ ಇತ್ತರು ಅದುವೂ ಶಿವನಭಾಷೆ

ಕಂದನಾಡುವ ನುಡಿಯ ಮುತ್ತನಾಗಿಸೊ ತೊದಲು
ಸೊಲ್ಲನಿಂಚರವೆನಿಸೋ ಇಹವು ನಾನು
ನನ್ನ ಇರುವಿಕೆ ಅಳಿದು ಮೀರಿ ಬೆಳೆದಂತೆಲ್ಲ
ಇಂಪ ನೀಡುವ ಅಪಸ್ವರವು ನಾನು

ಏಳುತೇಳುತ ಕೆಡವಿ ನಡಿಗೆ ರೂಪಿಸೊ ಕಸುವು
ಮೊಳಕೆ ಪಸೆಯನು ಅಳೆವ ಅವನಿ ನಾನು
ಪಾಶಪೂಸಿಯೂ ಮೊರೆವ ರೋದನವ ಅಡಗಿಟ್ಟು
ಪನ್ನತಿಕೆಯನು ಬೆಳೆಸೋ ಸೃಷ್ಟಿ ನಾನು

ಆನಂದ, ಮಕರಂದದ ಮೇರುಗಿರಿಗಳ ಅಡಿಯ
ನಡಿಗೆ ತಪ್ಪಿಸಿ ಕಾಡೋ ಭವವು ನಾನು
ಹಸಿಕಂಪಿನನುಭವವ ಮತ್ತಷ್ಟು ನಿಜಗೊಳಿಸಿ
ಮಾಯಮುಕುತಿಯ ಬೆಸೆಯೊ ಅನುಭಾವ ನಾನು

ಕರೆದು ತರುವೆಯಾ ಗೆಳತಿ!!!

‍ಲೇಖಕರು Admin

July 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಬದರಿನಾಥ ಪಳವಳ್ಳಿ

    ಶಿವನ ಭಾಷೆ ಎಂದಿಗೂ ನಮಗೆ ಸಕಾರಾತ್ಮತೆಯೇ ಅಲ್ಲವೇ! ಹಾಗಾಗಿ ಲೋಪ ದೋಷಗಳನೆಲ್ಲ ಅವನ ಚರಣದಿ ಸಲ್ಲಿಸುತ್ತೇವೆ ನಾವು.

    ಆ ಮೂಲಕ ತಿದ್ದಿ ಕೊಳ್ಳಲು ನಮ್ಮನ್ನೇ ನಾವು ಒಡ್ಡಿಕೊಳ್ಳುತ್ತೇವೆ. ಹಾಗಾಗಿಯೇ, ಸಣ್ಣಪುಟ್ಟ ಅಪಸ್ವರಗಳು ಸಹ ತಾಲೀಮಿನ ನಂತರ ಸುಸ್ವರಗಳೇ ಆಗುವುದು ನಿಶ್ಚಿತ.

    ಕವನದ ಹೂರಣ, ಭಾಷೆಯ ಬಳಕೆ ಮತ್ತು ಕವನದ ಉಪ ಸಂಹಾರಳೆಲ್ಲವೂ ಚೆನ್ನ ಚೆನ್ನ. ಈ ಕವನವು ಸರ್ವಕಾಲಿಕ.

    ನಿಮ್ಮ ಕವನದ ಅಮಲಿನಲ್ಲಿಯೇ ನಮಗೂ ತಿರುಳುಗಟ್ಟುವ ಆಸೆ ಚಿಗುರುತಿದೆ ಸಾರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: