ಸತ್ಯಪ್ರಕಾಶ್ ರಾಮಯ್ಯ ಹೊಸ ಕವಿತೆ-ಸರಳ ರೇಖೆ

ಸತ್ಯಪ್ರಕಾಶ್ ರಾಮಯ್ಯ

ನಿರ್ದಿಗಂತದ ಬಯಲ ಕಪ್ಪು ರಂದ್ರದೊಳಗೆ

ಮಹಾಸ್ಪೋಟವೊಂದನು ಕಂಡು ಕುರುಡಾಯಿತು ಒಳಗಣ್ಣು

ಆ ಕಣ್ಣ ಒಳಗಿನ ಅಗಣಿತ ವಿಸ್ಮೃತಿಗಳ ಕಂಡು ಸಾವರಿಸಿಕೊಳ್ಳದೆ ಘಾಸಿಗೊಂಡಿತು ಹುಸಿಕನಸು

ನಡುರಾತ್ರಿಯ ಕನಸು ಮೈಸವರಿ‌ ಹೋದ ಕ್ಷಣ ಗಾಳಿಯಲಿ ಬೆರೆತು ಹೋಯಿತು ಬೆವರ ಘಮಲು

ಯಾವ ನೋವೋ ಏನೋ ಹೊಕ್ಕುಳ ಹೂವ ಹುಡುಕಾಟದಲಿ ಕರಗಿಹೋಯಿತು ನೆರಳು 

ದಟ್ಟ ಕೂದಲ ಕತ್ತಲೊಳಗೆ ಬ್ರಹ್ಮಾಂಡವನೇ ಸೃಷ್ಟಿಸಿತು ಎದೆಯ ಬಾಂದಳದ ಚಿಟ್ಟೆ

ಅನಿಶ್ಚಿತತೆಯ ಆತ್ಮಕೆ‌‌ ಮುಲಾಮು ಹಚ್ಚಿದ

ಕೈಗಳ ಸ್ಪರ್ಷಕೆ ಮೆತ್ತಗಾಯಿತು ಪೂರ್ವಸೂರಿಯ ರಟ್ಟೆ! 

ವಿಧಿಯ ಹಳಿಗಳ ಸರಳ‌ ರೇಖೆಗಳನು ಬೆಸೆಯಲು ಬೆಳಕಿಗಾಗಿ ಇನ್ನೂ ಕಾಯುತ್ತಲೇ ಇದೆ ಮಿಂಚುಹುಳ

ಈ ಎಲ್ಲ ಭ್ರಮೆಗಳ ನಡುವೆ ಕನಸಿನ ಗೋಪುರಕೆ

ನೀರೆರೆಯುವ ಕೈಗಳನರುಸುತ್ತಲೇ ಇದೆ ಜೀವಜಲ! 

‍ಲೇಖಕರು avadhi

August 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: