ಸಂಧ್ಯಾ ಹೊನಗುಂಟಿಕರ್ ಕವಿತೆ – ಗೆದೆಯಬೇಕು ಮಗಳ…

ಸಂಧ್ಯಾ ಹೊನಗುಂಟಿಕರ್

ನಡುಮನೆಯ ಗೋಡೆಗೆ ನೇತುಹಾಕಿದೆ
ಗೀತೋಪದೇಶದ ಪಟ
ಅರ್ಜುನಗೆ ಕೃಷ್ಣನ ಪಾಠ
ಅಲ್ಲಲ್ಲಿ ಬಾಣಗಳ ಮೊನೆ
ಜೀವಗಳ ಕೊನೆ
ಕತ್ತರಿಸಿದ ಕೈ, ಹೊರಳಾಡುವ ಮೈ
ಗೋಡೆ ನೋಡಿದ
ಅಮ್ಮನ ಉವಾಚ:
ರಣಭೂಮಿಯ ಚಿತ್ರ
ಮನೆಯಲ್ಲೇಕೆ ಮಗಳೆ?
ಮನದಲ್ಲಿಯೇ ರಣರಂಗವಿರುವಾಗ…

ಕತ್ತಲೆಯ ಎದೆಯಲ್ಲಿ
ನೇಗಿಲ ಹೂಡಿ
ಕನಸ ಬಿತ್ತಿದರೂ
ಮೊಳಕೆಯೊಡೆಯದು
ಹಗಲ ನೆತ್ತಿಯಲ್ಲಿ
ಮನಸನೂರಿದರೂ
ಕುಡಿಯೊಡೆಯದು
ಯುದ್ಧವೆಂಬ ಹದ್ದು
ನೆತ್ತಿಯಲ್ಲಿರಲು.

ಗೆದೆಯೋಣ ಮೊದಲು
ಎದೆಯೊಳಗಿನ ಯುದ್ಧ
ಹದಗೊಂಡ ಬದುಕ
ಹೆದೆಗೇರಿಸಿಕೊಂಡು
ಹುದುಗಿದ ದುಃಖಕ್ಕ
ಬಾಣ ಹೂಡೋಣ

ಗೆದೆಯಬೇಕು ಮಗಳ..ss
ಅಸ್ತ್ರವಿಲ್ಲದ ಲಡಾಯಿ,
ಇಲ್ಲ ಯುದ್ಧೋನ್ಮಾದದ ಬಡಾಯಿ
ಕನಸುಗಳೆಲ್ಲ ಸೂಡುಕಟ್ಟಿ
ಬೆಂಕಿಯಿಲ್ಲದೆಯೇ ದಹನವಿಲ್ಲಿ

ಹರಗಬೇಕು ಎದೆಯಂಗಳ
ಉಸಿರುಗಟ್ಟುವ ಕೋಟಲೆಯ
ಹೆಡೆಮುರುಗಿ ಕಟ್ಟಿ
ಬದುಕು ಬಯಲಾಗಿಸಿ
ಬೆಳೆಯಬೇಕು ಹಸಿರು.. ಹಚ್ಚ ಹಸಿರು.
ಉಸಿರು
ಹನಿ…ಹನಿ…ಹನಿ…ತನಿ ಸುರಿದು…

‍ಲೇಖಕರು avadhi

February 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. prathibha nandakumar

    ಕವನ ಚೆನ್ನಾಗಿದೆ

    ಪ್ರತಿಭಾ ನಂದಕುಮಾರ್

    ಪ್ರತಿಕ್ರಿಯೆ
    • ಸಂಧ್ಯಾ ಹೊನಗುಂಟಿಕರ್

      ಧನ್ಯವಾದಗಳು ಮೇಡಂ.

      ಪ್ರತಿಕ್ರಿಯೆ
    • ಸಂಧ್ಯಾ ಹೊನಗುಂಟಿಕರ್

      ಧನ್ಯವಾದಗಳು ಮೇಡಂ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: