ಸಂಗಮೇಶ ಸಜ್ಜನ ಮೆಚ್ಚಿದ ಅಕ್ಷಯ ಪಂಡಿತರ ‘ಬಯಲಲಿ ತೇಲುತ ನಾನು’

ಸಂಗಮೇಶ ಸಜ್ಜನ

ಅಕ್ಷಯ ಪಂಡಿತರ ‘ಬಯಲಲಿ ತೇಲುತ ನಾನು’ ಕಥಾ ಸಂಕಲನ

೨೦೨೧ರ ‘ಈ ಹೊತ್ತಿಗೆ ‘ಯ ಬಹುಮಾನಿತ ಕೃತಿ

ಸಂಕಥನ ಪ್ರಕಾಶನ ‘ದ ಪ್ರಕಟಣೆ.

ನನಗೆ ಈ ಮಲೆನಾಡು ಮತ್ತು ಕರಾವಳಿಯವರ ಮೇಲೆ ಯಾವಾಗಲೂ ಹೊಟ್ಟೆ ಕಿಚ್ಚು… ಎಷ್ಟೆಲ್ಲಾ ವಸ್ತುಗಳ ಮೇಲೆ ಕತೆ ಬರೆಯುತ್ತಾರಲ್ಲಪ್ಪ ಅಂತ ಬೆರಗಾಗುತ್ತದೆ… 

ಅಂತಹದೇ ವಿಭಿನ್ನ ವಿಷಯಗಳ ಕತೆಗಳನ್ನೊಳಗೊಂಡ ಸಂಕಲನ ಅಕ್ಷಯ ಪಂಡಿತ ರವರ ‘ಬಯಲಲಿ ತೇಲುತ ತಾನು’ ಈ ಟೈಟಲ್ ಹೆಸರಿನ ಕತೆಯೇ ನನ್ನನ್ನು ಇಡೀ ದಿನ ಅಳಿಸಿದ್ದಂತೂ ಸುಳ್ಳಲ್ಲ… ಬಡತನದ ಬದುಕು ನಮ್ಮನ್ನು ಎಲ್ಲೆಲ್ಲ ಕೊಂಡೊಯ್ಯುವುದರ ಜೊತೆಜೊತೆಗೆ ಏನೇನೆಲ್ಲ ಮಾಡಿಸುತ್ತದೆ ಅಲ್ವಾ… ಹಾಗಾಗಿ ಇದು ತುಂಬಾನೇ ಮನಸ್ಸಿನಲ್ಲುಳಿಯುವ ಕತೆ. 

ಮುಂಬರುವ ‘ರೇಖೆಗಳು’ ‘ಎಲ್ಲೂ ಸಲ್ಲದವರು’ ‘ಭಾರತ್ ಸಿಟಿ’ ‘ಫ್ರೀ ವೆ’ ಇವೆಲ್ಲ ನಮ್ಮ ಹಳೆಯ ಮಂದಿಯ ಅನೇಕ ವಿಷಯಗಳನ್ನೊಳಗೊಂಡ ಕತೆಗಳು… ನಮ್ಮ ಈಗಿನ ಯುವಕರ ತವಕ ತಲ್ಲಣಗಳನ್ನು ಕತೆಗಾರರು ತಮ್ಮ ಕತೆಯಲ್ಲಿ ಚನ್ನಾಗಿಯೇ ನಿರೂಪಿಸಿದ್ದಾರೆ… 

ನಮ್ಮ ನಡುವೆ ದಿನ ನಿತ್ಯ ನಡೆಯುವ ಅನೇಕ ಸೂಕ್ಶ್ಮಾತಿ ಸೂಕ್ಷ್ಮ ವಿಚಾರಗಳು ನಮ್ಮ ಕಣ್ಣೆದುರಿಗೆ ಬಂದಾಗ, ಅರೆ ಇದು ನಮ್ಮದೇ ಕತೆ ಅಂತ ಆಶ್ಚರ್ಯಪಡುವುದೋ… ಒಮ್ಮಿಂದೊಮ್ಮೆ ಕಣ್ಣೀರಾಗುವುದೋ ಅಥವಾ ಖುಷಿ ಪಡುವುದೋ…

ಹೀಗೆ ಎಲ್ಲರಿಂದ ಸಾಧ್ಯ ಆಗುವುದಿಲ್ಲ…  ಈ ಪೂರ್ಣ ಸಂಕಲನ ಓದಿ ನನಗೂ ಗೋಡೆಗಳ ದಾಟಿ ನೀಲಿ ನಕ್ಷತ್ರಗಳನ್ನು ನೋಡುತ್ತಾ ರೆಕ್ಕೆಗಳ ಹಾಗೆ ಬಯಲಲಿ ತೇಲಾಡಿಸಿದ ಕತೆಗಾರರಿಗೆ ನನ್ನ ಧನ್ಯವಾದಗಳು. 

‍ಲೇಖಕರು Admin

December 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: