ಶೃತಿ ದೇವಾಂಗಮಠ ಹೊಸ ಕವಿತೆ- ಪ್ರೇಮದ ಸಿರಿ

ಶೃತಿ ದೇವಾಂಗಮಠ

ನಿನ್ನ ಕಣ್ಣ ಮಿಂಚಲ್ಲಿ ಹೃದಯ ಸೌಂದರ್ಯವೂ ಕಂಡದ್ದೇ ಕಾರಣವೇನೋ
ಮನಸು ನೀನೇ ಬೇಕೆಂದು ಹಠ ಹಿಡಿದು ಕೂರಲು

ಹೃದಯ ನಿನ್ನ ಬಯಸಲು, ನನ್ನ ಭಾಗ್ಯದಲ್ಲಿ ನೀನೇ ಇರಲು ಸರಿ ಹೋಯ್ತು
ಕುಣಿದು ಕುಪ್ಪಳಿಸಿ ಕೇಕೆ ಹೊಡೆಯೋಣ ಎನ್ನುವಷ್ಟರಲ್ಲಿ ನಿನ್ನ ಆಗಮನ
ಹೃದಯ ಓಡತೊಡಗಿತು ನಿನ್ನ ಕಣ್ಣ ಬಾಣದ ಹರಿತಕ್ಕೆ, ಮತ್ತೆ ಮತ್ತೆ ಹೆಚ್ಚುವ ಪ್ರೀತಿಗೆ

ಪಕ್ಕದಲ್ಲಿ ಕುಳಿತು ಸ್ವಲ್ಪ ಹತ್ತಿರ ಸರಿದರೂ ಸಾಕು ಹೊಟ್ಟೆಯಲ್ಲೆಲ್ಲ ಚಿಟ್ಟೆಗಳೇ
ಕೈ ಹಿಡಿದು ಚುಂಬಿಸಿದರಂತೂ ಕೇಳಲೇಬೇಡ
ವಿಶಾಲವಾದ ನಿನ್ನೆದೆಗೆ ತಲೆಯಿಡಲು ಅದೇನೋ ನಿರಾಳ

ಚುಚ್ಚುವ ಮೀಸೆ ಗಡ್ಡದ ನಡುವೆ ಮೃದುವಾದ ನಿನ್ನ ತುಟಿ
ಬಿರುಸಾದ ಹುಲ್ಲಿನ ನಡುವೆ ಬೆಳೆದ ಹೂವಂತೆಯೇ ಸರಿ
ಅದು ದುಂಬಿಯನಾಕರ್ಷಿಸಿದರೆ ನೀನು ನನ್ನನ್ನು

ಸೂಕ್ಷö್ಮವಾಗಿ ಕೆತ್ತಿದಂತಿರುವ ನಿನ್ನ ದವಡೆಯ ಸಾಲು
ಪದೇ ಪದೇ ನನ್ನ ಗಮನ ಸೆಳೆದರೆ ಅಚ್ಚರಿಯೇ ಬೇಡ
ಮನ್ಮಥ ರೂಪ ನಿನ್ನದು ರತಿ ನಾನೇ

ನಿನ್ನ ಪ್ರೇಮದ ಪರಿಗೆ ಸೋತಿರುವ ನಾನು
ಜೀವನವೆಲ್ಲ ನಿನ್ನ ಪ್ರೇಮದ ನೆರಳಲ್ಲೇ ಸವೆಸಲು ತಯಾರಾಗಿರುವೆ
ಪ್ರೀತಿ, ಪ್ರೇಮ, ಪ್ರಣಯ ಕಾವ್ಯಕ್ಕೆಲ್ಲ ನೀನೇ ಮುನ್ನುಡಿ ನೀನೇ ಬೆನ್ನುಡಿ
ಸವಿದು ಆನಂದಿಸುವ ಭಾಗ್ಯ ಮಾತ್ರ ನನ್ನದೇ

‍ಲೇಖಕರು Avadhi

March 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: