ಶಂಕರಾನಂದ ಹೆಬ್ಬಾಳ
ಗೀರಿದ ಕಡ್ಡಿಯ ತುದಿಯಲ್ಲಿ
ಒಲವು ಸುಟ್ಟು ಬೂದಿಯಾಗಿದೆ
ಬೊಗಸೆ ಕಣ್ಣಿನ ಚಂದ್ರ
ಬೆಳಕಿಗೆ ಬಾರದೆ ಮೋಡದಿ
ಅಡಗಿದ್ದಾನೆ…..
ಅವನೋ ಸ್ವಲ್ಪ
ಹುಂಬತನದ ಬುದ್ದಿಯಲಿ
ನಿನ್ನಂತಾಗಿದ್ದಾನೆ…..
ನಿಜ….
ನನ್ನೆದೆಯ ಕಪಾಟಿನಲ್ಲಿ
ನಿನ್ನ ಹೆಸರು ಅಳಿಸಿದೆ..!
ಹೃದಯದ ರಿಜಿಸ್ಟರಿನಲ್ಲಿ
ಗೈರು ಹಾಜರಿ ಪದೆಪದೆ..!
ಮುಗ್ದ ಮುಖದ ಭಾವಕ್ಕೆ
ಮೂಗುತಿ ಅಂದ
ಒನಪಿನ ಕದಪು
ಹುರುಪು ತರಲಿಲ್ಲ…..!
ಪ್ರೇಮದ ಸಂಕೋಲೆಯಲ್ಲಿ
ಈ ಜೀವನದ ದಾರಿ
ಸುಖ ಕಾಣಲಿಲ್ಲ…!
0 ಪ್ರತಿಕ್ರಿಯೆಗಳು