ಕನ್ನಡ ಪ್ರಕಾಶನ ರಂಗಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡುವ ಹಂಬಲ ‘ವೀರಲೋಕ’ದ್ದು. ವೀರಕಪುತ್ರ ಶ್ರೀನಿವಾಸ್ ಅವರ ಕನಸಿನ ಕೂಸು. ಕನ್ನಡ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಾಲ್ ಸೆಂಟರ್ ಆರಂಭಿಸಿರುವ ವೀರ ಲೋಕ ತಾನೇ ಸಾಕಷ್ಟು ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ. ‘ಬಿಬಿಸಿ ಪುಸ್ತಕ ಮಳಿಗೆ’ಯನ್ನು ಹೊಂದಿದೆ. ಈಗ ಇದರೊಂದಿಗೆ ಎಲ್ಲೆಡೆ zomato, swiggy ಯಂತೆ ತಕ್ಷಣದಲ್ಲಿ ಪುಸ್ತಕ ಮನೆಗೆ ತಲುಪಿಸುವ ‘ಬುಕ್ ಬಾಯ್’ ಯೋಜನೆಯನ್ನು ಜಾರಿಗೆ ತಂದಿದೆ.
ವೀರಲೋಕಕ್ಕೆ ಈಗ ಮೊದಲ ವರ್ಷದ ಸಂಭ್ರಮ. ಈ ಸಂಭ್ರಮವನ್ನು ಸಾಹಿತ್ಯ ಹಾಗೂ ಪ್ರಕಾಶನ ರಂಗದ ಮುಖ್ಯರ ಸಮ್ಮುಖದಲ್ಲಿ 12 ಕೃತಿಗಳನ್ನು ಬಿಡುಗಡೆ ಮಾಡುವ ಮೂಲಕ, ‘ಕನ್ನಡ ಮಾಣಿಕ್ಯ’ ಪತ್ರಿಕೆಯ ಸಿಬ್ಬಂದಿಯನ್ನು ಗೌರವಿಸುವ ಮೂಲಕ, ಬುಕ್ ಬಾಯ್ ಯೋಜನೆಗೆ ಚಾಲನೆ ನೀಡುವ ಮೂಲಕ ಆಚರಿಸಲಾಯಿತು.
ಆ ಸಂಭ್ರಮದ ಝಲಕ್ ಇಲ್ಲಿದೆ-
0 ಪ್ರತಿಕ್ರಿಯೆಗಳು