ರಮೇಶ್ ನೆಲ್ಲಿಸರ
ಬಿಸಾಡಿದ ತಂತಿಯನ್ನೆತ್ತಿಕೊಂಡು
ಮುರಿದ ಛತ್ರಿಯ ತೇಪೆ
ನಡೆಯುತ್ತಿತ್ತು,
ಹೊಸದನ್ನು ಕೊಂಡರಾಯಿತು!
ಎಂದರೆ, ಅಪ್ಪ ಕೇಳಬೇಕಲ್ಲವೆ?
ಊರು ಕೇರಿ ದೂಡಿದ,
ಘಟ್ಟ ಕಾಡಿನಲಿ ಕಂಡುಕೊಂಡ
ಬದುಕು.
ಎಲ್ಲವನು ಎಸೆದರಾಯಿತೆ?
ಎದುರಾಡಿ ಪ್ರಯೋಜನವಿಲ್ಲ
ಹಳೆಯ ಕಾಲದ ಬೇರು!
ಬೇಕು- ಬೇಡದ್ದೆಲ್ಲ ತಲೆಗೇರಿಸಿ
ಒತ್ತಡದಲಿ ಬೇಯುವ ಸ್ಥಿತಿ
ಬಂದಾಗ,
ಅಪ್ಪ, ಕರೆದು ತಲೆ ನೇವರಿಸುತ್ತಾರೆ!
ನೆರೆತ ಒಂದೊಂದೆ ತಲೆಗೂದಲು,
ಅವರ ಜೀವನವನ್ನು ತೆರೆದಿಡುತ್ತವೆ.
ನನಗೆ,ಜೀವನ ಪ್ರೀತಿಯ
ಪಾಠ ಕಲಿಸುತ್ತವೆ.
0 ಪ್ರತಿಕ್ರಿಯೆಗಳು