ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ – ಈಗ ಇರದ ಅದು…

ವಿಶ್ವನಾಥ ಎನ್ ನೇರಳಕಟ್ಟೆ

ಆಗ ಇತ್ತು, ಈಗಿಲ್ಲ
ನಮಗೇನು ನೋವಿಲ್ಲ

ಇದ್ದರಲ್ಲವೇ ಕರುಳು
ಮಿಡಿಯುವುದು ಒಡಲು
ಕರುಳು ಕಳಕೊಂಡವರಿಗೆ
ಬೇನೆ ಇಲ್ಲವು ಕಾಡಲು

ಹೇಳಬೇಕಾದ್ದನ್ನು ಹೇಳುವವರ
ಮನಸ್ಸಲ್ಲಿ ಮೋಹಪಾಶದ ಸಲುಗೆ
ಮೆಟ್ಟಿ ಕೊಂದವರ ಕಣ್ಣಲ್ಲಿ
ಗಾಢಾಂಧಕಾರದ ಹೊಗೆ

ಅದರಷ್ಟಕ್ಕೇ ಇತ್ತದು
ಬಂದವರಾರೋ, ಕೊಂದವರಾರೋ
ಋಣ ಮುಗಿಯಿತೆಂದುಕೊಂಡು
ಸುಮ್ಮನಾದೆವು ಕೊಲೆಯೊಂದನ್ನು ಕಂಡು

ಉಳಿಸಬಹುದಿತ್ತೇನೋ ಅದನ್ನು
ಮೊದಲೇ ಮನಸ್ಸು ಮಾಡಿದ್ದರೆ
ಮನಸ್ಸು ಮಾಡುವ ಮನಸ್ಸು
ನಮಗೆಲ್ಲಿದೆ ಹೇಳಿ?

‍ಲೇಖಕರು Admin

April 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: