ವಿದ್ಯಾ ಭರತನಹಳ್ಳಿ ಕಾಡುವ ಕವಿತೆ: ಈ ಹಾಡು ಬೇರೆಯದು..

ಒಲವು ತೇಲುವ ಒಡಲು

ವಿದ್ಯಾ ಭರತನಹಳ್ಳಿ

ಪ್ರಥಮ ಪ್ರಹರದ ಬೈರಾಗಿ
ಸಂಧಿಪ್ರಕಾಶದ  ಶಾಮ್ ಕಲ್ಯಾಣ್
ನಡುರಾತ್ರಿಯ ಅಭೋಗಿ
ಪ್ರೇಮಾಲಾಪ ವೈಭೋಗಕ್ಕೆ
ಜಾವಗಳ ಲೆಕ್ಕಬೇಡ.

ಈ ಹಾಡು ಬೇರೆಯದು
ಬೇಗುದಿಯ ರಾಗವಿದು
ಅವಳ ಎದೆಗೂಡಿನ ಜಾಡು
ನೊಂದ ಕಂಗಳ ಪಾಡು
ಕಾಣಿಸದಂತೆ ಎದೆಗೀರುಗಳ
ಮುಚ್ಚಲಾಗದು ನನಗೆ
ಸೆರಗು ಜಾರದಂತೆ
ಆ ಕೈಗಳಿಗಷ್ಟು ಶಕ್ತಿ ತುಂಬಬೇಕು

ಅವಿತಿಟ್ಟು ಸತ್ಯಗಳ
ನಾಳೆಗಾಗಿ ಹೊರಟವಳು
ಅವಳ ಅಳುವಿನ ಶಬ್ದ
ಗಾಳಿಯಲ್ಲಿ ಲೀನವಾಗುವುದು
ದರಕಾರಿಲ್ಲದ  ದಾರಿಯಲ್ಲಿ
ಅವಳು ಉಸಿರು ಚೆಲ್ಲುವಳು.

ನಮ್ಮದಲ್ಲದ ಬದುಕ
ಹಾಡಬಾರದು ನಾವು
ಸ್ವರಗಳಿಗೆ ಕೃತಕತೆಯ ಲೇಪ

ಭಾವ ಬರಡಾಗಿ ಕಿವಿ ಕಿವುಡಾಗಿ
ಅಶನ ವ್ಯಸನಗಳಲಿ ಮುಳುಗಿ
ಹಸಿದ ಹೊಟ್ಟೆ,ಬಿದ್ದ ರೊಟ್ಟಿ
ಎಲ್ಲವಕ್ಕೂ ತ್ಚುತ್ಚು ಅನ್ನುತ್ತ
ಕತ್ತರಿಸಿ ವಿಮರ್ಶಿಸುತ್ತ
ಯಾವುಯಾವುದೋ ವಾಸನೆಗಳನ್ನು ಹುಡುಕುತ್ತ
ತೀರ್ಪು ನೀಡುವವರು
ಕೊಂಕಿದ ತುಟಿಗಳ ಅವರು
ಕೇಳಲಿ ಬಿಡು

ಬರಿ ಗೀತೆಯಲ್ಲ
ಒಲವು ತೇಲುತ್ತಿದೆ ಒಡಲಲ್ಲಿ

‍ಲೇಖಕರು avadhi

July 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. gpbasavaraju

    ಈ ವಿದ್ಯಾ ಭರತನಹಳ್ಳಿ ಮತ್ತು ಪ್ರಜ್ಞಾ ಮತ್ತೀಹಳ್ಳಿ ಒಂದೇ ಎಂದು ತಪ್ಪಾಗಿ ಭಾವಿಸಿ, ಎರಡೂ ಪದ್ಯಗಳನ್ನು ಒಟ್ಟಾಗಿಯೇ ಓದಿದೆ. ಎಷ್ಟು ಚೆನ್ನಾಗಿವೆ ಈ ಎರಡೂ ಪದ್ಯಗಳು! ಮತ್ತೀಹಳ್ಳಿ, ಭರತನಹಳ್ಳಿ- ಯಾವ ಹಳ್ಳಿಯಾದರೇನು, ಕಾವ್ಯಕ್ಕೆ ಒಂದು ಒಳ್ಳೆಯ ದನಿ ಇದ್ದರೆ ಸಾಕು, ಎದೆಯೊಳಕ್ಕೆ ಇಳಿಯಲು.
    ಇಬ್ಬರಿಗೂ ಅಭಿನಂದನೆಗಳು
    -ಬಸವರಾಜು, ಜಿಪಿ.

    ಪ್ರತಿಕ್ರಿಯೆ
    • Vidya Bharatanahalli

      ಸರ್.ನಮಸ್ತೆ. ನೀವು ಕವಿತೆ ಓದಿದ್ದು ಇಷ್ಟ ಪಟ್ಟಿದ್ದು ಎರಡೂ ಖುಷಿ ನೀಡಿತು. ಧನ್ಯವಾದಗಳು. ನನ್ನ ಕವನ ಸಂಕಲನಕ್ಕೆ ಪ್ರಜಾವಾಣಿಯಲ್ಲಿ ತಾವು ವಿಮರ್ಶೆ ಬರೆದಿದ್ದಿರಿ.ಅದೂ ನೆನಪಾಯಿತು.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: