ವಿಜಯಶ್ರೀ ಹಾಲಾಡಿ ಹೊಸ ಕವಿತೆ-ಹೇಳಲಾರೆ!

ವಿಜಯಶ್ರೀ ಎಂ. ಹಾಲಾಡಿ

***

ನೋವು ಎದೆಗಿರಿದು

ಸುಡುವಾಗ

ಕವಿತೆ ಹುಟ್ಟಲಿಲ್ಲ

ಇನ್ನಿಲ್ಲವಾದ ಅಪ್ಪ

ಪದ್ಯದೊಳಗೆ ಬರಲೇ ಇಲ್ಲ

ಕಣ್ಣ ರೆಪ್ಪೆಯೊಳಗೆ

 ಗಾಯವಾಗಿ ಕುಳಿತ

ಪ್ಯಾಲಸ್ತೇನಿನ ಮಕ್ಕಳು

ಕಾವ್ಯವಾಗಲಿಲ್ಲ

 ದಾಸುಬೆಕ್ಕಿಗೆ

ನೆರೆಯವರು ವಿಷವುಣಿಸಿದಾಗ,

ನಗರದ ರಸ್ತೆಯೊಳಗೆ

ಹಸಿದ ಬೀದಿನಾಯಿ

ಅತ್ತಾಗ

ತತ್ತರಿಸಿದ ಪದಗಳು

ಹೊರ ಹೊರಡಲಿಲ್ಲ

ದ್ರೋಹದ ಚೂರಿಯಲಗು

ಎದೆಯಿರಿದು

ಹಿಡಿ ಕರುಣೆಯ

ಹಂಗಿಗೆ ಬಿದ್ದಾಗ

ಕವನ ಕೈ ಹಿಡಿಯಲಿಲ್ಲ

ಕಾವ್ಯವನ್ನು ದೂರಿ

ಕ್ರೂರಿಯಾಗಲಾರೆ

ಸಂಕಟಗಳಿಗೂ

ಕವಿತೆಗಳಿಗೂ

ವೈಮನಸ್ಸಿರಬಹುದು

ಅಥವಾ ಕಡುಸಂಕಟಗಳು

ಕವಿತೆಯ ಕುತ್ತಿಗೆ

ಒತ್ತಿ ಹಿಡಿಯುತ್ತವೆಯೋ!

ಬಹುಶಃ….

ಹೇಳಲಾರೆ!

‍ಲೇಖಕರು avadhi

December 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: