ವಿಜಯಶ್ರೀ ಹಾಲಾಡಿ ಹೊಸ ಕವಿತೆ- ನಿರಾಳ!…

ವಿಜಯಶ್ರೀ ಹಾಲಾಡಿ

ನನ್ನ ಕೈತೋಟದ ಹೂಗಳಿಗೆ
ಚಿಗುರು, ಒಣ ಗಿಡಗಳಿಗೆ
ಚುಂಬಿಸುತ್ತೇನೆ
ಬಾಚಿ ಬರಸೆಳೆದು
ತಬ್ಬುತ್ತೇನೆ
ಹಾಗೇ ನನ್ನ ಟೆಡ್ಡಿಯನ್ನು
ಬಳಸಿ ಮುತ್ತಿಟ್ಟು
ಮುದ್ದಿಸುತ್ತೇನೆ
ಇದೆಲ್ಲ ಏಕೆ ಹೇಳ-
ಬೇಕಾಯಿತೆಂದರೆ….
ಮೊನ್ನೆ ಯಾರೋ ಕೇಳಿದರಂತೆ
ಆ ಹೆಂಗಸಿನ ಗಂಡ ದೂರ
ದೇಶದಲ್ಲಿ, ಮಗಳೋ ಎದೆಯೆತ್ತರ ಬೆಳೆದವಳು
ಅವಳು ಯಾರನ್ನು ಮುಟ್ಟುತ್ತಾಳೆ
ಪ್ರೀತಿ ತೋರಿಸುತ್ತಾಳೆ ಎಂದು!

ಸದ್ಯ ಆ ದಿನ ನಾನು
ನನ್ನ ಕನಸು
ಕಲ್ಪನೆಯಲ್ಲಿ ಕಾಡುವ
ಅಮೂರ್ತ ಪ್ರೇಮಿಯ
ಕುರಿತು ಹೇಳಲಿಲ್ಲ
ನಾನು ಬರೆಯುವ
ಕವಿತೆಗಳಲ್ಲಿ ಧುಮ್ಮಿಕ್ಕುವ
ಅವನ ಬಗೆಗೆ
ಚಕಾರವೆತ್ತಲಿಲ್ಲ
ಹಾಗೇನಾದರೂ ಆಗಿದ್ದರೆ
ಆ ಸಣ್ಣ ಊರೊಳಗೆ
ಎಂತೆಂತಾ ಗಡಿಬಿಡಿ
ಸಂಭವಿಸೀತೆಂದು ಊಹಿಸಿಯೇ
ಕೈ ಬಿಟ್ಟೆ!

ಇಲ್ಲ, ಇನ್ನೊಮ್ಮೆ
ಎಲ್ಲವನ್ನೂ ಅರುಹಿ ಹಗುರಾಗಿ
ಹೊಟ್ಟೆ ಬಿರಿಯೆ ನಕ್ಕು
ಕದವಿಕ್ಕಿ ಒಂದು ಹಗಲು
ಒಂದು ರಾತ್ರಿ
ನಿದ್ರಿಸಿ ಬಿಡಬೇಕು
ಬೆಳಗ್ಗೆ
ಅರಳುವ ಹೂಗಳ ಕಾಣುತ್ತ
ನಿರಾಳ ಚಹಾ ಹೀರಬೇಕು!

‍ಲೇಖಕರು Admin

August 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ನೂತನ ದೋಶೆಟ್ಟಿ

    ಹಗುರವಾಗಿ ಸುವ ಕವಿತೆ ವಿಜಯಶ್ರೀ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: