ವಿಜಯಶ್ರೀ ಎಂ ಹಾಲಾಡಿ ಕವಿತೆ- ಕನಸು ನೀಡಿದ ಭಿಕ್ಷೆ! 

ವಿಜಯಶ್ರೀ ಎಂ ಹಾಲಾಡಿ 

ಹಿರಿಯ ಬಂಧುವೊಬ್ಬರನ್ನು
ಕರೆ ತಂದಿತ್ತು ಕನಸು…
ಕಸಿವಿಸಿಯೆನಿಸಿತು,
ಅವರಾದರೂ
ಕಾಲು ಶತಮಾನದ
ಕಾಲು ಹಾದಿಯಲ್ಲಿ
ನಿಂದಿಸಿ ಅಪಮಾನಿಸಿ
ಹೀಗಳೆದವರು!

ಎದುರುಗೊಂಡೆ
ಹೆಸರು ಹಿಡಿದು
ಮಾತಾಡಿಸಿದರು
ಓದಿಸಿಕೊಂಡ ಕವಿತೆಗಳು
ನಿನ್ನ ತೋರಿಸಿದವು
ಎಂದವರೇ
ಕ್ಷಮೆಯಿರಲಿ
ಜಾತಿ ಮೀರಿದ ಮದುವೆಗೆ
ನಿನ್ನ ನಿಲುವಿಗೆ
ನಿರ್ದಯಿಯಾದೆ
ಎಂದು ನೆಲ ನೋಡಿದರು

ಸಾವರಿಸಿಕೊಂಡು
ಎಲ್ಲವೂ ಕಾಲದ ತೀರ್ಮಾನ
ಎನ್ನುವಷ್ಟರಲ್ಲಿ
ನನ್ನ ಕಣ್ಣು ಮಂಜಾದವು
ನಡುನಡುವೆ ಸುದೀರ್ಘ
ಮೌನ
ಒದ್ದೆ
ಮಾತು
ಕಂಬನಿ
ನಿಟ್ಟುಸಿರು….

ಕನಸು ನೀಡಿದ
ಭಿಕ್ಷೆ
ಬದುಕು!

‍ಲೇಖಕರು avadhi

May 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Jayasrinivasa Rao

    ಎಷ್ಟು ಚೆನ್ನಾಗಿದೆ ಈ ಕವನ … though the subject is heavy, the tone is subdued and impactful …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: