ವಸುಂಧರಾ ಕದಲೂರು ಹೊಸ ಕವಿತೆ: ಹರಟೆ- ಪುರಾಣ

ವಸುಂಧರಾ ಕದಲೂರು

ಹಾಲಿಡೇ ಮೂಡಿನಲ್ಲಿ
ಸೀರಿಯಲ್ ಜಾಡು ಹಿಡಿದು
ಒಬ್ಬರ ಮೈಗೊಬ್ಬರಂಟಿ ಕುಳಿತಿದ್ದ
ಇಬ್ಬರು ಹರಟುತ್ತಿದ್ದರು..

‘ಶೂರ್ಪನಖಿಯೇ ಅವನ
ಅಪಹರಿಸಿದ್ದರೆ..! ಈಕೆ
ಬೆಂಕಿಗೆ ಹಾಯಿಸುತ್ತಿದ್ದಳೇ?
ಕಾಯಿಸುತ್ತಿದ್ದಳೆ!’

‘ಕೂಡುವ ಮುನ್ನ ಸಂಶಯಿಸಿ
ಕಾಡುತ್ತಿದ್ದಳೇ…! ಮತ್ತೆ
ಕಾಡಿಗಟ್ಟುತ್ತಿದ್ದಳೇ?’

‘ಇರಲಾರದು’ ಇವನ
ನಂಬುಗೆ. ‘ಏಕಿರಲಾರದು?’
ಅವಳ ಕೊಂಕು.
‘ಆಕೆ ಭೂಮಿಯಂಥವಳು..’
ಇವನಿಗೆ ಹೆಮ್ಮೆ.
‘ಭೂಕಂಪವೂ ಆಗುತ್ತಲ್ಲಾ..’
ಇವಳ ಪ್ರಶ್ನೆ.

‘ಪುರಾಣದ ಮರು ಓದು ಬೇಕು.
ಭೇಷ್! ಅಪವ್ಯಾಖ್ಯಾನ
ಕೂಡದು’ ಸಿಡಿದು ಎದ್ದನು

‘ಮಹಾರಾಯಾ.. ಈಗ
ನಮ್ಮ ಕಾಲಕ್ಕೇ..’ ಇವಳು
ಏನೋ ಹೇಳ ಹೊರಟಾಗ…

‘ಸಾಕು ನಿಲ್ಲಿಸು ನಿನ್ನ ಪುರಾಣ.’
ಎನ್ನುತ್ತಾ ಕೋಪ ಶಮನಕ್ಕೆ ಕುದಿವ
ನೀರಿಗೆ ಚಹಾ ಹುಡಿ ಹಾಕಿ ಅಡುಗೆ
ಮನೆಯಿಂದ ಕೂಗಿದ.

‘ಅದನ್ನೇ ನಾನೂ ಹೇಳಿದ್ದು,
ನನಗೊಂದು ಕಪ್ಪು ತಾ..’
ಎಂದಿವಳು ಲ್ಯಾಪುಟಾಪಿನ
ಮೈ ಸವರಿ ನಕ್ಕಳು..

‍ಲೇಖಕರು Admin

June 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: