ಪದ್ಮಿನಿ ನಾಗರಾಜು ಹೊಸ ಕವಿತೆ- ದಾರಿ ಯಾವುದಯ್ಯ…

ಡಾ ಪದ್ಮಿನಿ ನಾಗರಾಜು

ಬದುಕೆಂಬ ಮಾರುಕಟ್ಟೆಯಲಿ
ಮಾರಾಟವಾಗುತ್ತಿವೆ ಕನಸು
ಕೊಳೆಯುತ್ತಿವೆ ಮನಸ್ಸು
ಕೊಂಡು ಮಾರುವ ಭರಾಟೆಯಲಿ
ಬೆತ್ತಲಾಗುತ್ತಿವೆ ರೂಪಾಯಿಗಳು

ಸಾವು ನೋವು ಬಿಕರಿಯಾಗುತ್ತಿವೆ
ಹೃದಯಕ್ಕೆ ಅಪ್ಪಳಿಸುವ ಅಲೆಯಂತೆ
ನೋವು ಅವರವರ ಸಂಬಂಧಿ
ಎದೆಗೆ ಬಿದ್ದ ಹನಿಗಳಂತೆ
ಕತೆಗಳ ನೆನಪಿಸುತ್ತಿವೆ
ಮಳೆಯ ಮಣ್ಣ ಘಮಲಂತೆ

ಇಂದು ಅವರ ಸರದಿ
ನಾಳೆ ನಮ್ಮದು ಎಂಬುದು
ಲೋಕದುಕ್ತಿ
ಮಾತು ಹೊರಬಂದು
ಶಿಲಾಲೇಖದಂತೆ ಗುರುತು ಉಳಿಸಿ
ಹೃದಯಕ್ಕೆ ದಾಟಿಸಿದೆ

ಮೂರು ದಿನದ ಬದುಕಲ್ಲಿ
ಮುವತ್ತು ಮುಖವಾಡ
ಧರಿಸಿ ಸುತ್ತಾಡುವುದು
ಅಭ್ಯಾಸವಾಗಿದೆ
ಲಾಭ-ನಷ್ಟಗಳ
ಗುಣಾಕಾರ ಭಾಗಾಕಾರದಲಿ
ಮಣ್ಣಲ್ಲಿ ಮಡಿದವರ ಹೆಸರು
ಅದ ವ್ಯಾಪಾರ ಮಾಡಿದವರು
ಲೆಕ್ಕ ಒಪ್ಪಿಸಬೇಕಲ್ಲಿ

ಲೆಕ್ಕ ತಪ್ಪದಂತೆ
ಬದುಕ ಸಾಗಿಸಬೇಕು
‘ಬೆತ್ತಲಾಗದೆ ಬಯಲು ದಕ್ಕದು’
ಅಲ್ಲಮನ ಮಾತಿದು
ಬೆಳಗು ಕತ್ತಲಾಗುವ ಮುನ್ನ
ಕಾಯ ಕರಗುವ ಮುನ್ನ
ತಳ ಒಡೆದ ದೋಣಿಯಲಿ ಕುಂತು
ಬೋರ್ಗರೆವ ಕಡಲಲ್ಲಿ ನಿಂತು
ದಾರಿ ಕೇಳುತ್ತಿದ್ದೇನೆ
ದಾರಿ ಯಾವುದಯ್ಯ….

‍ಲೇಖಕರು Admin

June 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸತೀಶ್ ಕುಮಾರ್. ಕೆ

    ತುಂಬಾ ಅರ್ಥಪೂರ್ಣ ಕವಿತೆ

    ಪ್ರತಿಕ್ರಿಯೆ
  2. ಚಂದ್ರಪ್ರಭ ಕಠಾರಿ

    ಕವಿತೆ ಮುಖವಾಡದ ಬದುಕಿನ ವಾಸ್ತವಕ್ಕೆ ಕನ್ನಡಿ ಹಿಡಿದಿದೆ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: