ವಸಂತ ಬಂಧ

ದೀಪ್ತಿ ಭದ್ರಾವತಿ

ಒಲುಮೆಯ ಕವಿ ಬಳಿ ಬಂದ
ಕುತ್ತಿಗೆ ಬಳಸಿ ಕೇಳಿದಳು ಚೈತ್ರೆ
“ತಂದಿಯೇನು ನಾ ಕೇಳಿದ ಕವಿತೆ!?”

ಆತ ನಸುನಕ್ಕು ಬೆರಳ ಸೋಕಿ ಸುಮ್ಮನೆ ನಿಂತ
ಅವನ ಜೇಬು ತಡಕಿದಳು
ಸಿಕ್ಕ ಕಾಗದದ ಚೂರು, ಹಳೆಯ ಪೆನ್ನು
ಎದೆಗೊತ್ತಿ ಮತ್ತೆ ಕೇಳಿದಳು
“ಎಲ್ಲಿ ನನ್ನ ಕವಿತೆ”?

ಅವ ಮಂದಹಾಸದ ಚಾಮರದೊಳಗೆ
ಅಧರ ಅದ್ದುತ್ತ ಹೇಳಿದ
“ಹುಡುಕಿ ನೋಡು ಒಮ್ಮೆ ನನ್ನೊಳಗೆ”

ಚೈತ್ರೆ ಅಲೆಯಲೆಯಾಗಿ ಅಲೆಯತೊಡಗಿ:
ಕಣ್ಣು, ಕಿವಿ ನರನಾಡಿ
ಊರೂರುಗಳ ಗಲ್ಲಿ ಗಲ್ಲಿ
ಅಲ್ಲೋಲ ಕಲ್ಲೋಲ
ಹಸಿರು ಕಣ್ಣಿನ ಸಂತೆಯಲ್ಲಿ
ಜೇನಿನ ಭರಪೂರ ಮಾರಾಟ
ಹತ್ತಿ ಇಳಿದ ಮೆಟ್ಟಲಲ್ಲಿ
ಮಧುನಲೆಗಳ ಮುತ್ತಿ ಅರಳಿತು
ಮುದ್ದು ಲಿಲ್ಲಿ ಹೂ
ಬಿಸಿಲು ಮೈ ಬಿರಿದು ನಕ್ಕಿತು!
ಶಾಖಾಹಾರಿ ಅಂತ:ಪುರದಲಿ
ತಂಪು ಐಸ್ ಕ್ರೀಮಿನ ಸಮುದ್ರ ತೇಲಿ
ಮೊಗ್ಗೆ ಮಲ್ಲಿಗೆ ಉಕ್ಕಿತು

ಸೊಕ್ಕಿ ತೊನೆದ ವಸಂತ
ಚಿಗುರು ಚೈತ್ರೆಯ ಒದ್ದೆ ಕೂದಲ ನೇವರಿಸಿ
ಕೇಳಿದ “ಸಿಕ್ಕಿತೇ ಕವಿತೆ..?”
ಬಾನ ಜೇನಿನಲಿ ಮಿಂದ ಚೈತ್ರೆ
ಅವನ ಗುಂಗುರು ನೇವರಿಸಿ
ಹೇಳಿದಳು “ಸಿಕ್ಕುವುದೇ ಬೇಡ ಕವಿತೆ”

‍ಲೇಖಕರು avadhi

September 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಪ್ರಕಾಶ್ ಪೊನ್ನಾಚಿ

    ಚನಾಗಿದೆ ಮೇಡಮ್..

    ಪ್ರತಿಕ್ರಿಯೆ
  2. Hema Sadanand Amin

    ಖುಷಿ ಆಯ್ತು ದೀಪ್ತಿ. ಒಳ್ಳೆಯ ಕವಿತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: