'ರೋಗಗ್ರಸ್ತ ಮನಸ್ಸುಗಳು ನಿರ್ಮಿಸಿದ ಸ್ಥಾವರಗಳಿಗೆ …'

ಬುದ್ಧನ ಮೇಲೆ ಬಾಂಬ್

ಎಂ ಎಂ ಶೇಕ್ ಯಾದಗಿರಿ


ನಿಸ್ತೇಜದ ನಿರ್ವೀರ್ಯದ
ಮನಸ್ಥಿತಿಗಳೇ ಹೀಗೆ..!!!!!
 
ಸಿಡಿಯುವುದಿಲ್ಲ, ಅವನ
ಆ ಶಾಂತ ನಗೆ ..
ಅಚ್ಚೊತ್ತಿದೆ ಬಾನಂಗಳದಲ್ಲಿ .
 
ರೋಗಗ್ರಸ್ತ ಮನಸ್ಸುಗಳು
ನಿರ್ಮಿಸಿದ ಸ್ಥಾವರಗಳಿಗೆ …
ಅಣ್ಣ ನಿಲುಕಲಿಲ್ಲ ……
ಏಸು ಒಲಿಯಲಿಲ್ಲ…..
ಬುದ್ಧ ಬಿರಿಯಲಿಲ್ಲ…. !!!!
 
ಪದೇಪದೆ ನೆಲ ಕೆದರಿ
ಹೀಗೆ ಹೆದರಿಸುವುದೇಕೆ ?
ತಾಕತ್ತಿದ್ದರೆ …
ಒಂದೇ ಸಲ ಕಟ್ಟಿಬಿಡು
ಸೂರ್ಯನಿಗೊಂದು ಬಾಂಬ್ ……!!!!!!
ಆದರೂ ನೆನಪಿರಲಿ ……
ಒಂದೊಂದು ಹನಿ ಕುಡಿದ
ಭೂಮಿಯ ಹಸಿ ಮತ್ತೂ ಆರುವುದಿಲ್ಲ …….!!!!!!!!
 
 

‍ಲೇಖಕರು avadhi

July 19, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. raju

    ಉತ್ತಮವಾದ ಕವಿತೆ,ಆದರೆ ಇದೆಲ್ಲ ಮೂಲಭೂತವಾದಿ ಕೊಳಕು ಮನಸ್ಸಿನ ನಿರ್ಲಜ್ಜ ಪಾಖಂಡಿಗಳಿಗೆ ತಿಳಿಯುವುದಾದರು ಹೇಗೆ,

    ಪ್ರತಿಕ್ರಿಯೆ
  2. Gururaj katriguppe

    ಬುಧ್ದನಿಗೆ, ಅವನು ಬೋಧಿಸಿದ ‘ ಅಹಿಂಸೆ ‘ ಗೆ ಸಾವಿಲ್ಲ, ಒಳ್ಳೆಯ ಕವಿತೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: