ಬುದ್ಧನ ಮೇಲೆ ಬಾಂಬ್
ಎಂ ಎಂ ಶೇಕ್ ಯಾದಗಿರಿ
ನಿಸ್ತೇಜದ ನಿರ್ವೀರ್ಯದ
ಮನಸ್ಥಿತಿಗಳೇ ಹೀಗೆ..!!!!!
ಸಿಡಿಯುವುದಿಲ್ಲ, ಅವನ
ಆ ಶಾಂತ ನಗೆ ..
ಅಚ್ಚೊತ್ತಿದೆ ಬಾನಂಗಳದಲ್ಲಿ .
ರೋಗಗ್ರಸ್ತ ಮನಸ್ಸುಗಳು
ನಿರ್ಮಿಸಿದ ಸ್ಥಾವರಗಳಿಗೆ …
ಅಣ್ಣ ನಿಲುಕಲಿಲ್ಲ ……
ಏಸು ಒಲಿಯಲಿಲ್ಲ…..
ಬುದ್ಧ ಬಿರಿಯಲಿಲ್ಲ…. !!!!
ಪದೇಪದೆ ನೆಲ ಕೆದರಿ
ಹೀಗೆ ಹೆದರಿಸುವುದೇಕೆ ?
ತಾಕತ್ತಿದ್ದರೆ …
ಒಂದೇ ಸಲ ಕಟ್ಟಿಬಿಡು
ಸೂರ್ಯನಿಗೊಂದು ಬಾಂಬ್ ……!!!!!!
ಆದರೂ ನೆನಪಿರಲಿ ……
ಒಂದೊಂದು ಹನಿ ಕುಡಿದ
ಭೂಮಿಯ ಹಸಿ ಮತ್ತೂ ಆರುವುದಿಲ್ಲ …….!!!!!!!!
ಉತ್ತಮವಾದ ಕವಿತೆ,ಆದರೆ ಇದೆಲ್ಲ ಮೂಲಭೂತವಾದಿ ಕೊಳಕು ಮನಸ್ಸಿನ ನಿರ್ಲಜ್ಜ ಪಾಖಂಡಿಗಳಿಗೆ ತಿಳಿಯುವುದಾದರು ಹೇಗೆ,
Superb
ಬುಧ್ದನಿಗೆ, ಅವನು ಬೋಧಿಸಿದ ‘ ಅಹಿಂಸೆ ‘ ಗೆ ಸಾವಿಲ್ಲ, ಒಳ್ಳೆಯ ಕವಿತೆ.