ರಾಧೆಯ ಸ್ವಗತಗಳು

ಸ್ಮಿತಾ ವೈ ಬಿ 

ನನ್ನ ವಸ್ತ್ರ ಕದ್ದು ಓಡುತ್ತಿದ್ದ ಕೃಷ್ಣನಾತ

ತಾಳ್ಮೆ ಕಮ್ಮಿ ,ಹುಚ್ಚು ಧೈರ್ಯ ಮಾತ್ರ

ಈಗ,

ದ್ರೌಪದಿಗೆ ಸೀರೆಯ ಮೇಲೆ ಸೀರೆ ಒದಗಿಸಿದನಂತೆ

ಹೌದೇ…!?

 

ಅವನ ಕೊಳಲ ಒಳಗೆ ನುಸುಳಿ

ಉಸಿರ ಬಿಸಿಗೆ ಕರಗಿ

ಬೆರಳು ಸೋಕಿದಲ್ಲಿ ಅರಳಿ

ನಾದವಾಗಿ ಹೊಮ್ಮುತಿದ್ದೆ

ಈಗ,

ಬರೀ ಶಂಖವನ್ನೇ ಊದುತಿರುವನಂತೆ

ಹೌದೇ..!?

ಇಷ್ಟವಾಗುತಿತ್ತು ಆತ ಕೊಡುವ ಹುಸಿಕಾಟ

ಮರದ ಮೇಲೂ ನಡೆಯುತಿತ್ತು ಪ್ರೀತಿಪಾಠ

ಕೊಳಲ ಕದಿವ ಮುನಿಸು, ಜಡೆ ಎಳೆವ ಕೀಟಲೆ

ಈಗ,

ಹದಿನಾರು ಸಾವಿರದ ಮೇಲೆ

ಎಂಟು ಹೆಂಡಿರ ಗಂಡನಂತೆ

ಎಳೆದು ಜಗ್ಗಾಡುತಿರುವರಂತೆ

ಕಂಗೆಟ್ಟಿದ್ದರೂ, ಗೀತೆ ಭೋಧಿಸುತಿರುವನಂತೆ

ಹೌದೇ…!?

‍ಲೇಖಕರು avadhi

February 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಸಚಿನ್‌ಕುಮಾರ ಹಿರೇಮಠ

    ಹೌದು… ಕೃಷ್ಣ ಬದಲಾಗಿದ್ದಾನೆ…ಚೆಂದದ ಕವಿತೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: