ರಮೇಶ್ ಎಮ್ ಗೋನಾಲ್ ಕವಿತೆ- ನೆನಪುಗಳ ಋಣಭಾರ ಹೊತ್ತು…

ರಮೇಶ್ ಎಮ್ ಗೋನಾಲ್

ಹೀಗೇಕೆ ನೀ ದೂರಾದೇ ಕನಸೇ..
ಒಂದಿನಿತೂ ಹೇಳದೇ; ನನ್ನನೂ ಕೇಳದೇ
ಕಾಡುತಿದೆ ನಾಳೆಯೂ ನನಗೆ ನಿನ್ನದೇ ನೆನಪುಗಳ ಋಣಭಾರ ಹೊತ್ತು…

ಅಂದು
ಆ ಕಗ್ಗತ್ತಲ ರಾತ್ರಿಯಲ್ಲೂ…
ಕಣ್ಣಂಚಿನ ಕಲ್ಪನೆಯಲ್ಲಿ ಕನಸುಗಳ ಜಾಡು ಹೆಣೆದಿದ್ದೆ ನೀನು!
ಇಂದು
ಕಂಡ ಕನಸುಗಳ ದಫನ್ ಮಾಡಿ ಬಹು ದೂರ ನಡೆದಿದ್ದೆ ಗೊತ್ತಿಲ್ಲದಂತೆ ಏನು !

ದಾರಿಯುದ್ದಕ್ಕೂ ನಿನ್ನ ಹೆಜ್ಜೆ ಗುರುತುಗಳು ತಾಕಿ
ಉಳಿಸಿ ಹೋಗಿದೆ ಮಾಯಲೋಲಕದ ಸದ್ದು..
ಮನವೇಕೋ ಮೌನದಿ ಮೆರವಣಿಗೆ ಹೊರಟಿದೆ ನಿನ್ನದೇ ನೆನಪಿನ ಶವಪೆಟ್ಟಿಗೆಯೊಳಗೆ..

ಜಾತಿ ಕೆಸರೊಳಗೆ ಸಿಲುಕಿ ಒಲವ ತಾವರೆ ನರಳಿತ್ತು;
ಕುಡಿಯೊಡೆವ ಮುನ್ನ!
ಪ್ರೀತಿ ಸೋತು ಆಗುವುದೇ ಆಹುತಿ ;
ಕಳೆದುಕೊಂಡು ಪ್ರಕೃತಿ !
ಯಾವುದು ನಿಮ್ಮ ಸಂಸ್ಕೃತಿ!?

‍ಲೇಖಕರು avadhi

March 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: