ಮಾನಪ್ಪಣ್ಣನಿಲ್ಲದ ‘ಕವಿಶೈಲ’

ನೆಂಪೆ ದೇವರಾಜ್

ಕುಪ್ಪಳ್ಳಿಯ ಪ್ರತಿ ಗಿಡ ಮರ ಬಳ್ಳಿಗಳ ಸಕಲ ಸಲ್ಲಕ್ಷಣಗಳನ್ನೂ ಅರಿತು ವಿವರಿಸುವ ಜಾಣ್ಮೆಯ ಮನುಷ್ಯ-ಉಂಟೂರು ಮಾನಪ್ಫ . ಪ್ರತಿಯೊಂದು ಹಕ್ಕಿಯ ಕೂಗನ್ನು ಗುರುತಿಸಿ ಅದರ ಇರುವಿಕೆಯ ಗೌಪ್ಯತೆಯನ್ನು ಬಹಿರಂಗಗೊಳಿಸಬಲ್ಲ ಪ್ರತಿಭೆ ಮಂದಣ್ಣನೋಪಾದಿಯಲ್ಲಿ ಗೂಡು ಕಟ್ಟಿಕೊಂಡಿತ್ತು.

ನಾವೆಲ್ಲ ಒಂದಷ್ಟು ಸಣ್ಣ ಪುಟ್ಟ ಹುಡುಗರೊಡಗೂಡಿ ಮೊನ್ನೆ ಮೊನ್ನೆ ಸೂರ್ಯೋದಯ ಸವಿಯಲು ನವಿಲುಕಲ್ಲು ಗುಡ್ಡಕ್ಕೆ ಹೋದಾಗ ದಾರಿಯಗುಂಟ ಸಿಗುತ್ತಿದ್ದ ನೂರಾರು ಗಿಡಗಂಟಿಗಳ ಪರಿಚಯ ಮಾಡುವ ತಾಕತ್ತಿನ ಅರಣ್ಯಪಾಲಕರಾಗಿ ನಮಗೆಲ್ಲ ಕಂಡಿದ್ದರು..

ಹಕ್ಕಿ ಪಕ್ಷಿ, ಗಿಡ ಗಂಟಿ, ಬಳ್ಳಿ, ಅಬ್ಬರಿ, ಸೂರ್ಯ, ಚಂದ್ರ ಚುಕ್ಕಿಗಳ ಮೇಲೆ ಬರೆದ ಪದ್ಯಗಳನ್ನು ಅದೆಷ್ಟು ಚನ್ನಾಗಿ ಉದ್ಘೋಷಿಸುತ್ತಿದ್ದರೆಂದರೆ ಕವಿ ಹೃದಯಿ ಕದಲದಂತೆ ನೋಡಿಕೊಳ್ಳುತ್ತಿದ್ದರು.

ಹಕ್ಕಿಯೊಂದರ ಇಂಚರದ ಸದ್ದನ್ನು ಮನುಷ್ಯ ಭೇದಿಸಲಾರದ ಉಡುಕಲಿನಿಂದ ಹೊರಬರುವ ಪರಿಯನ್ನು ಗ್ರಹಿಸುವ ಪರಿಪೂರ್ಣ ತನ್ಮಯತೆ ಇತ್ತು. ಎರಡು ತಿಂಗಳ ಹಿಂದೆ ಮಾನಪ್ಪಣ್ಣ ನವಿಲು ಕಲ್ಲಿನಲ್ಲಿ ನಮ್ಮೊಂದಿಗೆ ಒಂದಾಗಿ ತುಂಬ ವಿಷಯ ಹಂಚಿಕೊಂಡಿದ್ದರು. ಅ ಚಿತ್ರಗಳನ್ನೂ ಹಾಕಿದ್ದೇನೆ.

ನಿನ್ನೆ ಮಾನಪ್ಪಣ್ಣ ನಮ್ಮನ್ನಗಲಿದ ಸುದ್ದಿಯಿಂದ ಕುಗ್ಗಿ ಹೋದೆ. ಮಾನಪ್ಪಣ್ಣನಿಲ್ಲದ ಕವಿಶೈಲ ಹೇಗಿರುತ್ತದೋ ಏನೋ?

‍ಲೇಖಕರು Avadhi

May 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: