ಮಾಧವ ಬರಲಿಲ್ಲ…..

ಒಂದು ಕವಿತೆ

ದಯಾನಂದ್

ಮಾಧವ ಬರಲಿಲ್ಲ
ತಡವಿಕೊಳ್ಳುತ್ತಾ ನಡೆದಿತ್ತು
ಕಾಲ
ಅಕಾಲದಲ್ಲಿ ಮರೆತ
ಮೂರೂಮುಕ್ಕಾಲು ಪಾವು
ಮುತ್ತುಗಳ ಪೋಣಿಸುವ
ಮುತ್ತಿನ ಸರದ ಹುಡುಗಿಯರ
ಸಾವಿನ ಸಂಕಟಕ್ಕೆ;
ಅವರದಾರಿಯಲ್ಲಿ
ಮುತ್ತೇ ಮುತ್ತು.
 
ಗೋಕುಲದಲ್ಲಿ ನಡೆಯಲಿಲ್ಲ
ಸಾವಿರ ಸೂಳೆಯರ
ಸತ್ಯಾಗ್ರಹ ಡೌಲು
ಉಪವಾಸ ಕುಂತು
ಬಿಸ್ಕೆಟ್ಟು, ಬೋಮರ್ೀಟಗಳ ತೇಗಲ್ಲಿ
ಸೆರಗ ಬಿಚ್ಚಿ
ಬಟಾಬಯಲಿಗೆ
ಕುಂತ ಕಾಮಿನಿಯರ ಕೂಗು
ಯಮುನೆಯಲ್ಲಿ ನೆನೆಯಲಿಲ್ಲ;
ವದ್ದೆಯಾಗಲಿಲ್ಲ..,
ಮಾಧವ ಬರಲಿಲ್ಲ.
 
ಮುತ್ತಿನ ಹುಡುಗಿಯರ
ಕೊಂಡುಹೋದ ಸಮುದ್ರ,
ಸತ್ಯಾಗ್ರಹಿ ಸೂಳೆಯರ
ನುಂಗಿದ ಸಮುದ್ರ
ಮುಳುಗಿಸಿತ್ತು ದ್ವಾರಕೆಯ
ಮಾಧವ ಹೋದ ಮೇಲೆ,
ಯಮುನೆಯಂತೂ ಹರಿಯುತ್ತಿದ್ದಾಳೆ
ಅದೇ ಪ್ರಶಾಂತದಲ್ಲಿ,
ದಂಡೆ ಕಾದಿದೆ ಉಬ್ಬರಕ್ಕೆ
 

‍ಲೇಖಕರು avadhi

October 8, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: