ಒಂದು ಕವಿತೆ
ದಯಾನಂದ್
ಮಾಧವ ಬರಲಿಲ್ಲ
ತಡವಿಕೊಳ್ಳುತ್ತಾ ನಡೆದಿತ್ತು
ಕಾಲ
ಅಕಾಲದಲ್ಲಿ ಮರೆತ
ಮೂರೂಮುಕ್ಕಾಲು ಪಾವು
ಮುತ್ತುಗಳ ಪೋಣಿಸುವ
ಮುತ್ತಿನ ಸರದ ಹುಡುಗಿಯರ
ಸಾವಿನ ಸಂಕಟಕ್ಕೆ;
ಅವರದಾರಿಯಲ್ಲಿ
ಮುತ್ತೇ ಮುತ್ತು.
ಗೋಕುಲದಲ್ಲಿ ನಡೆಯಲಿಲ್ಲ
ಸಾವಿರ ಸೂಳೆಯರ
ಸತ್ಯಾಗ್ರಹ ಡೌಲು
ಉಪವಾಸ ಕುಂತು
ಬಿಸ್ಕೆಟ್ಟು, ಬೋಮರ್ೀಟಗಳ ತೇಗಲ್ಲಿ
ಸೆರಗ ಬಿಚ್ಚಿ
ಬಟಾಬಯಲಿಗೆ
ಕುಂತ ಕಾಮಿನಿಯರ ಕೂಗು
ಯಮುನೆಯಲ್ಲಿ ನೆನೆಯಲಿಲ್ಲ;
ವದ್ದೆಯಾಗಲಿಲ್ಲ..,
ಮಾಧವ ಬರಲಿಲ್ಲ.
ಮುತ್ತಿನ ಹುಡುಗಿಯರ
ಕೊಂಡುಹೋದ ಸಮುದ್ರ,
ಸತ್ಯಾಗ್ರಹಿ ಸೂಳೆಯರ
ನುಂಗಿದ ಸಮುದ್ರ
ಮುಳುಗಿಸಿತ್ತು ದ್ವಾರಕೆಯ
ಮಾಧವ ಹೋದ ಮೇಲೆ,
ಯಮುನೆಯಂತೂ ಹರಿಯುತ್ತಿದ್ದಾಳೆ
ಅದೇ ಪ್ರಶಾಂತದಲ್ಲಿ,
ದಂಡೆ ಕಾದಿದೆ ಉಬ್ಬರಕ್ಕೆ
nice very nice..sir