’ಮಾತಾಡಿ ಮುಗಿಸಬಹುದಾಗಿದ್ದ ಮನಸ್ತಾಪವೊಂದನು…’

ಕೆಲವು ಕವಿತೆಗಳು

ಕು ಸ ಮಧು ಸೂಧನ

ಕಲ್ಲಿನ ಕಥೆ!


ಕೆತ್ತದೆ ಉಳಿದ ಕಲ್ಲು
ಬಯಲಲೇ ಬಿದ್ದು
ಬಿಸಿಲಲಿ ಬೆಂದು
ಇನ್ನಷ್ಟು ಕಪ್ಪಾಯಿತು
ಕೂತಲ್ಲೇ ಮುಪ್ಪಾಯಿತು!
ಕೆತ್ತಿಸಿಕೊಂಡು ಶಿಲೆಯಾದ ಕಲ್ಲು
ಗರ್ಭಗುಡಿಯ ಮೂರುತಿಯಾಗಿ
ಆರತಿ ಅಭಿಷೇಕ
ದೂಪ ದೀಪಗಳ
ಹೊಗೆಯಲಿ
ಮೈ ಮರೆಯಿತು
ಮೆರೆಯಿತು
ಸ್ಥಾವರಕೆ
ಸಾಕ್ಷಿಯಾಯಿತು.
 
ಅರಿವು

ಹಿಡಿದು ನಿಂತರೆ
ಆಯುಧವ
ನೀನು
ರಣರಂಗದೊಳು
ನಾನು
ತ್ಯಜಿಸುವೆ ಶಸ್ತ್ರ!
ಸೋಲುವ
ಸಾಯುವ ಬಯವಲ್ಲ
ಹಿಡಿದು ನಿಂತರೆ
ಖಡ್ಗ
ಇಬ್ಬರೂ
ಇಲ್ಲವಾಗುತ್ತೇವೆಂಬ
ಅರಿವು!
ಗೆದ್ದೆನೆಂದು ಬೀಗದಿರು
ಬಾಹುಬಲಿಯ
ಮರೆಯದಿರು!
 
ಬಟ್ಟೆಗಳು

ಬಟ್ಟೆಗಳು ನಗುತ್ತವೆ
ತೊಟ್ಟವರು
ತನ್ನ ಉಟ್ಟೂ
ಬೆತ್ತಲಾಗಿದ್ದಕ್ಕೆ!
ಬಟ್ಟೆಗಳು ನಾಚುತ್ತವೆ
ತನ್ನ ಉಟ್ಟು
ನೀಟಾದೆವೆಂದು ಕೊಂಡವರು
ಒಳಗೆ ಕೊಳಕಾಗಿದ್ದಕ್ಕೆ!
ಬಟ್ಟೆಗಳು ಬೆರಗಾಗುತ್ತವೆ
ತನ್ನ ತೊಟ್ಟು
ಮೆರೆಯುವವರ ಗತ್ತಿಗೆ
ಬಟ್ಟೆಗಳು ಕರುಬುತ್ತವೆ
ತೊಟ್ಟೊಡನೆ ತನ್ನ
ಬದಲಾಗುವ
ಮನುಷ್ಯರ ಅಂತಸ್ತಿಗೆ!
 
ಮುನಿಸು


ಮೌನದಲಿ
ಮುಗಿಸಬಹುದಾಗಿದ್ದ
ಮುನಿಸೊಂದನು ಮಾತಾಡಿ ಮಾತಾಡಿ
ಮೈಲಿಗಟ್ಗಟಲೆ ಎಳೆದೆವು!
 
ಮಾತಾಡಿ
ಮುಗಿಸಬಹುದಾಗಿದ್ದ
ಮನಸ್ತಾಪವೊಂದನು ಮೌನಕೆ ಶರಣಾಗಿ
ಮಹಾಯುದ್ದ ಮಾಡಿದೆವು!
 
ಮಾತು ಮೌನಗಳ ಮೌಲ್ಯವನರಿಯದೆ
ಸಂಬಂದಗಳ ಸೇತುವೆಯನ್ನು
ಕಡಿದು ಹಾಕಿದೆವು!
 

‍ಲೇಖಕರು G

September 9, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: