ಮಹಾಂತೇಶ್ ಪಾಟೀಲ ಹೊಸ ಕವಿತೆ- ಗಾಂಧಿಗಿಡ

ಡಾ.ಮಹಾಂತೇಶ್ ಪಾಟೀಲ

೧.

ಎಷ್ಟೊಂದು ಚಿಗುರಿತ್ತು

ದಿಕ್ಕು ದಿಕ್ಕಿಗೆ ಮೈಚಾಚಿದ ಟೊಂಗೆ

ಮೂಡಣ ಪಡುವಣದ ಹಕ್ಕಿಗಳು ಕಟ್ಟಿದವು ಗೂಡು

ಸ್ವಾತಂತ್ರ್ಯದ ತಲೆಗಳು ಹೂಮೂಡಿದವು

ಹಸಿದ ಆತ್ಮಗಳು ಗಿಡದ ಹಣ್ಣು ತಿಂದೆವು 

ಬಳಲಿದ ಭಾವಗಳು ನೆರಳುಂಡವು

ಒಂದೇ ಎರಡೇ ಗಿಡದ ಗರಿಮೆ-ಹಿರಿಮೆ

೨.

ಆಗ ಎಷ್ಟೊಂದು

ಹೂ ಹಣ್ಣು ಬೀಜಕೆ ರಾಜಯೋಗವಿತ್ತು…

ಆದರೂ ಮಹಾತ್ಮ

ಮರವೆನಿಸಲಿಲ್ಲ ಈ ಮಂಪರು ಮಂದಿಗೆ!.

೩.

ಒಬ್ಬ ಗಾಂಧಿಗಿಡ ಬೇರಿಗೆ ಗುಂಡಿಟ್ಟ

ಮತ್ತೊಬ್ಬ ಚಿಗುರಿಗೆ ಆಸಿಡ್ ಎರಚಿದ

ಮಗದೊಬ್ಬ ಹೂಗಳ ಹೊಸಕಿ ಹಾಕಿದ!

ಈಗ ಎಲೆಗೊಬ್ಬಬ್ಬರು ಗೋಡ್ಸೆಗಳು ಹುಟ್ಟಿ

ಬೊಲ್ಡಿಜರ್ ದೊರೆಯೊಬ್ಬ ಫರ್ಮಾನು ಹೊರಡಿಸಿದ್ದಾನೆ

ಗಾಂಧಿಗಿಡದ ಜಾಗ ಅತಿಕ್ರಮಣವೆಂದು!

೪.

ಉಸಿರಿಗೆ ಗಾಳಿಯಂತಿದ್ದ ಗಾಂಧಿಗಿಡ

ಸುತ್ತ ಗಾಂಪರರ ಮೈತ್ರಿಕೂಟವೀಗ

ಗಾಂಧಿ ಗಿಡದಲ್ಲಿ 

ವಸಂತದ ಚಿಗುರಿಲ್ಲ

ಹಣ್ಣಿನ ಕನಸು ಬೇರೆ ನಮಗೆ!

ಆಫೀಸು ಮನೆಯ 

ಅಲಂಕಾರಿಕ ಶೋಕಿಸಿನಲಿ

ಬಣ್ಣದ ಪ್ಲಾಸ್ಟಿಕಿನ ಗಾಂಧಿಗಿಡ

ಎಂದಾದರು ಚಿಗುರಿತು?!

‍ಲೇಖಕರು avadhi

October 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: