ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ- ಅವರವರದೇ ಕತೆ..

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಸೂಜಿ ಮೊನೆಯಷ್ಟು ಜಾಗದಲ್ಲಿ
ಸಾಸಿವೆ ಬೆಳೆದು
ಹಳದಿ ಹೂವಿಗೆ
ನೀಲ ತುಂಬಿ ಮುತ್ತಿಕ್ಕಿ
ಬಲಿತ ಕಾಯಿಗಳು
ಬಿಸಿಲಿಗೊಗ್ಗರಣೆ ಹಾಕಿವೆ
ನೀನು ಹಬ್ಬಕ್ಕೆ ಬಂದಿರುವ ಸುದ್ದಿ
ಮೂಗಿಗೆ ರವಾನೆ

ಮೂಗಿನ ಕರಾಮತ್ತಿಗೆ
ಹತ್ತಿರವೇ ಇದ್ದ ಮೆದುಳಲ್ಲಿ
ಭೂತದ ಕೋಲ

ಕೂಗಿಗೆ ಮಾರ್ದನಿಸಲು
ದಟ್ಟ ಕಾಡಾಗಲೀ
ಬೆಟ್ಟದ ಕಣಿವೆಗಳಾಗಲೀ ಇಲ್ಲ

ಏನಿದ್ದರೂ
ಬಯಲ ಸೀಮೆಯಲ್ಲಿ
ಬಯಲ ಕೂಡಿ
ಬಯಲ ಕಳೆಯುವ ಲೆಕ್ಕ

ಹಾಗಾಗಿ
ವನವಾಸಕ್ಕೆಂದು
ಹಾಯುತ್ತಿದ್ದ ರಾಮನಿಗೆ
ಬಯಲಾಟದವರು
ರಾಮಾಯಣವನ್ನೇ
ಆಡಿ ತೋರಿರಬೇಕು
ಅಂತೆಯೇ
ಪಾಂಡವರಿಗೆ ಮಹಾಭಾರತವ

ಅವರ ಮುಂದೆ
ಅವರವರದೇ ಕತೆ

ಬಯಲ ಕನ್ನಡಿಯಲ್ಲಿ
ಸೀತೆ ದ್ರೌಪದಿ
ಬಿಟ್ಟು ಹೋದ
ಕಣ್ಣೀರಿನ ಕೊಳಗಳು
ಎತ್ತ ನೋಡಿದರೂ
ಬಿಸಿಲಲಿ ಮರೀಚಿಕೆಗಳು

‍ಲೇಖಕರು avadhi

May 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: