ಮರುಳ ನಾ ಮದಿರೆ ನೀ..

ಜಯಶ್ರೀ ಭ.ಭಂಡಾರಿ / ಬಾದಾಮಿ

ನೀನಿಲ್ಲದೆ ನನಗೆಲ್ಲ ಬರಿ ಭಣಭಣ
ಒಡಲ ತುಂಬ ಅನುರಾಗ ಪ್ರತಿಕ್ಷಣ
ಹೇಳೆ ಪ್ರಿಯಲತೆ ಬಂಧಿಸಲೆ ದೇವತೆ
ಬಾರೆನ್ನ ಚೆಲುವೆ ಸರಗಿಯ ಶೋಭಿತೆ

ನೋಟದಿ ಸೆಳೆದೆ ನಗುತ ನಿಂದೆ
ಮಾಯಗಾತಿ ಅದೆಲ್ಲಿಂದ ಬಂದೆ
ಮನದಲಿ ನೂರಾರು ಆಸೆಗಳ ತಂದೆ
ಹೂವ್ವಿನ ಗಂಧದಲಿ ಎನ್ನ ಮೀಯಿಸಿದೆ

ಕೆಂಪಿನ ಕೆನ್ನೆಯ ಮರೆಯಲಿ ಹೆಂಗೆ
ಹರಳಿನ ಕೊರಳನು ಚುಂಬಿಸಿ ನಿಂಗೆ
ಹೆರಳನು ಬೆರಳಲಿ ಆಡಿಸಲೇನ ಹಂಗೆ
ಗುಳಿಕೆನ್ನೆಯ ಒಡತಿ ಬಾರೆ ನೀ ಬಳಿಗೆ

ಕಾಯಿಸದಿರು ಒಲವ ಸೂಸಿದ ನಾರಿ
ಸಮ್ಮತಿಸು ನೀ ಬಾಳ ಹಬ್ಬದ ಬಂಗಾರಿ
ಹೃದಯ ಹಿಗ್ಗ ತಡೆಯಲಾರೆ ಸಿಂಗಾರಿ
ತಂದಿರುವೆ ಕರೆದೊಯ್ಯಲು ಅಂಬಾರಿ

ಹೇಗೇಗೋ ಇದ್ದೆ ನಾ ಮರುಳನಂತೆ
ನೀ ಬಂದೆ ಮದಿರೆಯ ಮೋಹದಂತೆ
ಸುರಗಿಯ ಸುತ್ತಿ ನಿಂತೆ ಜಾರದಂತೆ
ಅನುಮಾನ ಬೇಡ ಅನುಮತಿಸು ಕಾಂತೆ

‍ಲೇಖಕರು avadhi

July 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: