ಕಾಲೇಜು, ಕ್ಲಾಸು, ಪ್ರ್ಯಾಕ್ಟಿಕಲ್ಸ್, ಪರೀಕ್ಷೆ ಇದೆಲ್ಲರ ನಡುವೆ ಪುಸ್ತಕ ಹೊರ ತರುವುದು ತುಂಬಾ ತಡವಾಯ್ತು. ಇದು ನನ್ನ ಮೂರನೆಯ ಅನುವಾದಿತ ಕೃತಿ. ‘ಪಲ್ಲವ ಪ್ರಕಾಶನ’ದಿಂದ ಪ್ರಕಟಗೊಳ್ಳುತ್ತಿದೆ.
ರಾಮಯಣದ ಅಲಕ್ಷಿತ ಸ್ತ್ರೀಪಾತ್ರಗಳ ಅಸ್ಮಿತೆಯನ್ನು ಸೀತೆಯ ಮುಖೇನ ಕಟ್ಟಿಕೊಡುವ ಈ ತೆಲುಗು ಕೃತಿಗೆ ೨೦೧೫ ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಸಂದಿದೆ.
ಓಲ್ಗಾ ಅವರ ಕ್ರಾಂತಿಕಾರಿ ಬರಹಗಳು ಈಗಾಗಲೇ ಕನ್ನಡಿಗರಿಗೆ ಪರಿಚಿತ. ರಾಮಾಯಣವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ವಿಶ್ಲೇಷಿಸುವ ಈ ಕೃತಿಯ ಅನುವಾದವನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತೀರಿ ಎಂದುಕೊಂಡಿರುವೆ.
180 ಪುಟಗಳ ಈ ಕೃತಿ ಇಷ್ಟರಲ್ಲೇ ಲಭ್ಯವಾಗಲಿದೆ.
-ಅಜಯ್ ವರ್ಮಾ ಅಲ್ಲೂರಿ
ಓದುವ ಕಾತರಗಳೊಂದಿಗೆ…
ಈ ಸಂಕಲನದೊಳಗಿನ ಕೆಲ ಕತೆಗಳನ್ನು ಪ್ರಕಟಿಸಿ ಸಹೃದಯ ಓದುಗರಿಗೆ ತಲುಪಿಸಿದ ಅವಧಿ ತಂಡಕ್ಕೆ, ಜಿ.ಎನ್.ಮೋಹನ್ ಸರ್ ಅವರಿಗೆ ಮನದಾಳದ ನೆನಕೆಗಳು.
ನಿಮ್ಮ ಸಹಕಾರ ಮರೆಯುವಂತಿಲ್ಲ.