ಮಣ್ಣಾಗಬೇಕಿತ್ತು..

ಸುರೇಶ ಎಲ್.ರಾಜಮಾನೆ

ಅಲ್ಲಿ ನೋಡಿದೆ ಅವನ
ಅವನು ವಿಶ್ವಮಾನವನಾಗಲು
ಕಷ್ಟಪಡುತ್ತಿದ್ದ
ಅಬ್ಬಾ..!
ಅದೆಷ್ಟು ಕಷ್ಟ.

ಅಂದರೆ,
ಅವನೊ ಮೊದಲು
ಹುಟ್ಟಿರಬೇಕು ಇಲ್ಲ
ಮಾನವನಾಗಿರಬೇಕು
ಎರಡೂ ಅಲ್ಲದೇ
ನಗುವ ಕಣ್ಣೀರ ಸುರಿಸುತ್ತ
ಅಳುವವರ ಮುಂದೆ
ಕೂತಿದ್ದ.

ಎಲ್ಲವೂ ಬಯಲು ಬಯಲು
ಕಾಣುತ್ತಿದ್ದಾಗ
ಮತ್ತೆ ಅವನೇ ಕಂಡನು
ಅದೇನೊ ಹೇಳುತ್ತಿದ್ದ
ಅನಂತದ ಕುರಿತು
ಅಷ್ಟರಲ್ಲಿ ಅಡುಗೆ ಮನೆಯಲಿ
ಒಡೆದ ಕೊಡ ಅಂತರಂಗವ
ಸೆಳೆದುಕೊಂಡಿತು.

ದಾರಿಯ ಬದಿಯಲಿ
ಕುಳಿತ ತಿರುಕನ
ವಿಳಾಸ ಹುಡುಕುವ ಬರದಲ್ಲಿ
ತಿರುತಿರುಗಿ ಸಾಕಾಗಿ
ದಾರಿಹಿಡಿದವನು
ಮತ್ತೆ ಕಂಡನು ಅಲ್ಲೇ! ಅದೇ ದಾರಿಯಲಿ
ಅದೇನು ವಿಚಿತ್ರವೋ
ಅವನ ಮೈ ಬಟ್ಟೆಯನ್ನೇ
ತಿರಸ್ಕರಿಸಿರಲಿಲ್ಲ.

ಬೆತ್ತಲಾಗುವುದು ಬಯಲಾಗುವದು
ಮಾನವನಾಗುವುದು
ಸುಲಭಸಾಧ್ಯ
ಎಂದ ಅವನನ್ನೇ ಕಾಯುತ್ತಿದ್ದೆ

ಅವನು ಕಳ್ಳ
ಕದ್ದಿದ್ದು, ಕೆಡವಿದ್ದು
ಕಟ್ಟಿಕೊಂಡದ್ದೆಲ್ಲ
ಕಲ್ಲಮೇಲೆ ಅಚ್ಚಾಗಿದ್ದುದ ಕಂಡು
ನಾ ಮತ್ತೆ ಮಣ್ಣಿನತ್ತ
ಚಿತ್ತನಿಟ್ಟೆ.

‍ಲೇಖಕರು Avadhi

January 11, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಡಾ॥ ಶಿವಾನಂದ ಕುಬಸದ

    ತುಂಬ ಗಾಢವಾದ ಅನುಭವ ಕೊಡುವ ಕವಿತೆ

    ಪ್ರತಿಕ್ರಿಯೆ
    • KOTRESH T A M

      ಕವಿತೆ ನಾನಾ ಅರ್ಥಗಳ ಜೀವಂತ ಪ್ರಜ್ಞೆ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: