ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಕೊಪ್ಪಳದ ಯುವ ಕವಿ ಮೆಹಬೂಬ ಮಠದ ಅವರ ಚೊಚ್ಚಲ ಕವನ ಸಂಕಲನ ‘ಬಿಸಿಲು ಕಾಡುವ ಪರಿ’ ಆಯ್ಕೆಯಾಗಿದೆ.
ಮಾನವೀಯ ಕಾಳಜಿಯ ಆತ್ಯಂತಿಕ ನೆಲೆಯು ಅವರ ಕಾವ್ಯದ ಜೀವಾಳವಾಗಿದ್ದು ಹೊಸ ತಲೆಮಾರಿನ ಭರವಸೆಯ ಕವಿ ಎಂದು ವಿಮರ್ಶಕರು ಗುರುತಿಸಿದ್ದಾರೆ.
ಡಿಸೆಂಬರ್ ೧೨ ರಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಠದ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಎಂ. ವಾಯ್. ಮೆಣಸಿನಕಾಯಿ ಅವರು ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
0 ಪ್ರತಿಕ್ರಿಯೆಗಳು