ಮಂಜುಳ ಸಿ ಎಸ್ ಕವಿತೆ – ನಿನ್ನೆಂದು ಕಾಡಿಲ್ಲ !!

ಮಂಜುಳ ಸಿ ಎಸ್

ನಾನೇನು
ಚಂದ್ರನೂರಿನ
ನೀಲಾಗಸಕೇರಿ
ತಾರೆ ತಾರೆಂದು
ಬೊಗಸೆ ತುಂಬೆಂದು
ಪೀಡಿಸಲಿಲ್ಲ!

ಚಂದಮಾನನ
ಕತೆಯ
ರಾಜ ಕುಮಾರನಂತೆ
ಏಳು ಕೋಟೆ
ದಾಟಿ
ರಕ್ಕಸನೆದುರು
ಯುದ್ದ ಮಾಡಿ
ಕುದುರೆಯೇರಿ
ಕರೆದೊಯ್ಯೆನ್ನಲಿಲ್ಲ !

ಆ ಸಿಂಡ್ರೆಲಾಳ
ಕತೆಯಂತೆ
ಕಳೆದ
ಒಂದು ಪಾದರಕ್ಷೆ
ಹುಡುಕಿ
ನಿನ್ನರಮನೆಗೆ
ಕರೆದೊಯ್ಯಲು
ಕಾಯಲಿಲ್ಲ!

ಸಲ್ಲದ
ನೆನಸಾಗದ
ಕನಸುಗಳ
ಹೇರಿ
ನಿನ್ನ ಕಾಡಲಿಲ್ಲ!

ಹಾ…..ನೀ
ನನ್ನವಳೆಂಬ
ಭಾವ ನೀಡುವ
ನಿನ್ನ ಕಂಗಳ
ಕಾಂತಿಯನ್ನಷ್ಟೇ
ಬೇಡಿದ್ದು !!

ಇರುವ ನಿನ್ನ
ನೂರು ಕೆಲಸಗಳ
ಬಿಟ್ಟು
ನನ್ನನೇ ನೋಡೆಂದು
ಎಂದೂ ಕೇಳಲಿಲ್ಲ!

ಅದು ದುಬಾರಿಯೆನ್ನುವುದಾದರೆ
ಬೇಡ ಬಿಡು
ಎಂದಿನಂತೆ
ಚಂದಿರನಿದ್ದಾನೆ
ಬಿಡುವಾಗಿ
ನನಗಾಗೆಂದೇ
ನನ್ನೊಟ್ಟಿಗೆ
ಮಾತಾಡಲು
ಏಕಾಂತ ಕಳೆದು
ಬೇಸರ ನೀಗಲು
ಬೇಡದ ಕಟ್ಟಲೆಗಳ
ಹಾಕದೆ ಸುಮ್ಮನೆ
ಸಖ ಸಖಿ ಗೀತೆಯಾಡಲು !!

‍ಲೇಖಕರು Admin

May 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: