ರಮೇಶ ಉಡುಪ
ಮಂಗಳೂರಿನಲ್ಲಿ ನವಕರ್ನಾಟಕದ ಹೊಸ ಪುಸ್ತಕ ಮಳಿಗೆ ಉದ್ಘಾಟನೆಯಾಯಿತು.
ಶರವು ಗಣಪತಿ ದೇವಸ್ಥಾನದ ರಸ್ತೆಯಲ್ಲಿ ಈ ಮಳಿಗೆಯ ಪ್ರಾರಂಭೋತ್ಸವಕ್ಕೆಂದೆ ಹದಿನಾರು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಮಾನವಕುಲದ ಸೇವೆಯಲ್ಲಿ ಕಳೆದ 62 ವರ್ಷಗಳಿಂದ ನಮ್ಮೊಂದಿಗೆ ಹೆಜ್ಜೆಹಾಕುತ್ತಿರುವ ನಾಡಿನ ಸಮಸ್ತ ಓದುಗರಿಗೆ, ಲೇಖಕರಿಗೆ, ವಿನ್ಯಾಸಕಾರರಿಗೆ, ಮುದ್ರಕರಿಗೆ, ಪುಸ್ತಕ ವಿತರಕರಿಗೆ, ಸಿಬ್ಬಂದಿ ವರ್ಗದವರಿಗೆಲ್ಲರಿಗೂ ಧನ್ಯವಾದಗಳು ಹಾಗೂ ಅಭಿನಂದನೆಗಳು..
ಒಂದು ಜನಪರ, ಪ್ರಗತಿಪರ ನಿಲುವನ್ನು ಒಳಗೊಂಡ ಕ್ರತಿಗಳನ್ನು ನಿರಂತರವಾಗಿ ಪ್ರಕಟಿಸುವ ಮುಖಾಂತರ ಸಮಾಜದ ಕಣ್ಣನ್ನು ತೆರೆಸುವ, ಜಾಗ್ರತಗೊಳಿಸುವ ಕಾಯಕವನ್ನು ಮಾಡುತ್ತಾ ಬಂದಿರುವ ನವಕರ್ನಾಟಕ ಪ್ರಕಾಶನ ಸಂಸ್ಥೆಯ ಮುಖ್ಯಸ್ಥರಿಗೆ ಈಗ ಮಂಗಳೂರಿನಲ್ಲಿ ಮಳಿಗೆ ತೆಗೆದಿರುವದಕ್ಕೆ ಅಭಿನಂದನೆಗಳು, ಯುವ ಜನತೆ ಓದುವ ಮುಖಾಂತರ ಜಾಗ್ರತ ರಾಗಲು ಪ್ರೇರೇಪಣೆಯಾಗಲಿ ಎಂದು ಹಾರೈಸುತ್ತೇನೆ.