ಬೇಲಿದಾಟಿದ ಬಾಲೆಯ ನೆರಳೇ ಕಾಣುತ್ತಿಲ್ಲ

ಅನಿಲ್ ಗುನ್ನಾಪೂರ

ನಾನು ಸುಮ್ಮನೆ ಮರಳುಗಾಡಿನಲ್ಲಿ ಮುತ್ತು
ಹುಡುಕುತ್ತಿದ್ದೇನೆ
ಸಮುದ್ರದ ಅರಿವೇ ಇಲ್ಲ
ಮುತ್ತು ಸಿಗುವುದೆಲ್ಲಿ ಎಂಬುದು ನನಗೂ ತಿಳಿದಿಲ್ಲ
ಗುಳಿಕೆನ್ನೆಯ ಮೇಲೆ ಅಧರಗಳಿರಿಸಿದ ಗುರುತು
ಆರದಂತೆ ಕಾಪಾಡಿಕೊಂಡಿರುವೆ
ಯಾರಿರಿಸಿರಬಹುದೆಂದು ಈವರೆಗೂ ಗೊತ್ತಾಗಿಲ್ಲ

ನಾನು ಸುಮ್ಮನೆ ಒಂಟಿಗಾಲಿನಲ್ಲಿ ನಿಂತು
ಕಾಯುತ್ತಿದ್ದೇನೆ
ಇನ್ನೊಂದು ಕಾಲೂರುವ ಪರಿವೇ ಇಲ್ಲ
ಯಾರಿಗಾಗಿ ಕಾದಿರುವೆ ಎಂಬುದು ನನಗೂ ತಿಳಿದಿಲ್ಲ
ಕಾಗದದ ಮೇಲೆ ಕಾಡಿದ ಸಾಲುಗಳ ಹೊರತು
ಮತ್ತೇನೂ ಓದಿಲ್ಲ
ಯಾರು ಬರೆದಿರಬಹುದೆಂದು ಈವರೆಗೂ ಗೊತ್ತಾಗಿಲ್ಲ

ನಾನು ಸುಮ್ಮನೆ ಹದಿಹರೆಯದ ತುಡಿತಗಳಿಗೆ
ತಡೆಬೇಲಿ ಹಾಕಿದ್ದೇನೆ
ಬೇಲಿದಾಟಿದ ಬಾಲೆಯ ನೆರಳೇ ಕಾಣುತ್ತಿಲ್ಲ
ನೆರಳುಬೆಳಕಿನಾಟದಲ್ಲಿ ಬೆತ್ತಲೆಯಾದ ಮನಕೆ
ನಾಚಿಕೆಯೇ ಇಲ್ಲ
ಕಾಡುವ ನಿನ್ನ ನೆನಪುಗಳ ಮರೆತು
ಸುಖವಾಗಿರುವುದು ಹೇಗೆಂದು ತಿಳಿಯುತ್ತಿಲ್ಲ

 

‍ಲೇಖಕರು Avadhi GK

March 22, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: