ಅದಕ್ಕೇ ಅನ್ನೋದು ' ಜವಾರಿ ಮಂದಿ' ಯ ಹೃದಯ ಅಂತ

ಕಿರಣ್ ಭಟ್ ಹೊನ್ನಾವರ
ನಿನ್ನೆ ಊರಿಗೆ ಹೊರಟಿದ್ದೆ.
ಸಂಜೆ ಹೊತ್ತಿಗೆ ಸಣ್ಣಗೆ ಮಳೆ ಸುರುವಾಗಿತ್ತು.
ಮಳೇಲಿ ತೊಯ್ಯೋದನ್ನ ತಪ್ಪಿಸ್ಕೊಳ್ಳೋಕೆ ಬಸ್ ಸ್ಟ್ಯಾಂಡ್ ಒಳಹೊಕ್ಕೆ.ಜನ, ದನ, ನಾಯಿಗಳೆಲ್ಲ ಮಳೆಯ ಕಾರಣ ಬಸ್ ಸ್ಟ್ಯಾಂಡ್ ನ್ನೇ ಆಶ್ರಯಿಸಿದ್ದವು. ನಾನು ನಿಂತ ಜಾಗದಿಂದ ಸ್ವಲ್ಪ ದೂರದಲ್ಲಿ ಬಿಜಾಪುರ ಕಡೆಯ ಇಬ್ಬರು ಹುಡುಗರು ಜೋರಾಗಿ ಕಷ್ಟ ಸುಖ ಮಾತಾಡುತ್ತಿದ್ದರು.ಅಲ್ಲೇ ಆಶ್ರಯ ಪಡೆದಿದ್ದ ನಾಯಿಯೊಂದು ಕುಂಯ್ ಎಂದು ಸಣ್ಣಗೆ ಕೂಗುತ್ತ ಮಲಗಿತ್ತು.
ಮಾತಾಡಿ, ಮಾತಾಡಿ ಹಸಿವಾಗಿರಬೇಕು.” ಊಟ ಮಾಡೋಣೇನು?” ಅಂದ ಒಬ್ಬ. ಇನ್ನೊಬ್ಬ ಊಟದ ಗಂಟು ಬಿಡಿಸತೊಡಗಿದ.ಗಟ್ಟಿ ರೊಟ್ಟಿ, ಕೆಂಪು ಚಟ್ನಿ, ಉಳ್ಳಾಗಡ್ಡಿಯ ಬುತ್ತಿಯದು.
ಬುತ್ತಿ ಬಿಚ್ಚುತ್ತಿದ್ದ ಹುಡುನಿಗೆ ಕುಂಯ್ ಗುಡುತ್ತಿದ್ದ ನಾಯಿಯನ್ನು ಕಂಡು ಏನನ್ನಿಸಿತೋ ಏನೋ, ” ಕುರ್, ಕುರ್..” ಅಂತ ನಾಯಿಯನ್ನ ಕರೆಯತೊಡಗಿದ. ಆ ಕರೆಗಾಗೇ ಕಾಯುತ್ತಿತ್ತೇನೋ ಎನಿಸುವಂತೆ ಒಂದೇ ಜಿಗಿತಕ್ಕೆ ಆ ನಾಯಿ ಹುಡುಗನ ಮುಂದಿತ್ತು. ಬುತ್ತಿಯಿಂದ ರೊಟ್ಟಿಯನ್ನೆತ್ತಿ ಆ ಹುಡುಗ ನಾಯಿಯ ತಲೆ ನೇವರಿಸುತ್ತ ರೊಟ್ಟಿಯನ್ನು ತಿನ್ನಿಸತೊಡಗದ.
ಅಷ್ಟು ಹೊತ್ತಿಗೆ, ಎಲ್ಲಿದ್ದವೋ ಏನೋ ಇನ್ನೆರಡು ನಾಯಿಗಳು, ಒಂದು ದನ ಏಕಾಏಕಿ ಅಲ್ಲಿಗೆ ಧಾಳಿಯಿಟ್ಟವು.ರೊಟ್ಟಿಗಾಗಿ ಪೈಪೋಟಿ ಸುರುವಾಯ್ತು. ತನ್ನ ಹಸಿವನ್ನೇ ಮರೆತ ಆ ಹುಡುಗ ಒಂದೊಂದೇ ರೊಟ್ಟಿ ತೆಗೆದು ತಿನ್ನಿಸತೊಡಗಿದ.
ಪಕ್ಕದ ಹುಡುಗ ಅಸಹಾಯಕನಾಗಿ ನೋಡುತ್ತ ಕುಳಿತಿದ್ದ. ನೋಡನೋಡುತ್ತಿದ್ದಂತೆ ಬುತ್ತಿಯೇ ಖಾಲಿಯಾಗಿಹೋಗಿತ್ತು.
ಇಬ್ಬರ ಊಟವನ್ನೂ ಆ ಹುಡುಗ ನಾಯಿಗಳಿಗೆ ಹಂಚಿಬಿಟ್ಟಿದ್ದ…ಬುತ್ತಿ ಕಟ್ಟಿದ್ದ ಬಟ್ಟೆ ಕೊಡವಿ ಸಮಾಧಾನದ ನಗು ನಗುತ್ತಿದ್ದ…
ಅದಕ್ಕೇ ಅನ್ನೋದು ‘ ಜವಾರಿ ಮಂದಿ’ ಯ ಹೃದಯ ಅಂತ…..

‍ಲೇಖಕರು Avadhi GK

March 22, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Shridhar

    ಮನುಷ್ಯತ್ವ ಅಂತಾರಲ್ಲ ಅದು ಇದೇ ಇರಬೇಕು.

    ಪ್ರತಿಕ್ರಿಯೆ
  2. Pueet

    ಇದೆ ಉತ್ತರ ಕರ್ನಾಟಕ ಮಂದಿಯ ಹೃದಯವಂತಿಕೆ…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: