ಬಾ ಇಲ್ಲಿ ಕಣ್ಣ ತೇಲಿಬಿಡು
ರಾಜಕುಮಾರ ಮಡಿವಾಳರ್
ಬೆಳದಿಂಗಳ ತೀರದಲಿ ಬೆನ್ನು ಬೆನ್ನಿಂಗಾತು ಕೂತು,
ಒಂದೊಂದೇ ಚುಕ್ಕಿಯ ನೀರಿಗೆಸೆದದ್ದು ಹಳೆ ಮಾತು,
ಬಾ ಇಲ್ಲಿ ಕಣ್ಣ ತೇಲಿಬಿಡು
ನೆಲದ ಮೈ ಹರವು
ಬೆಳಗು ನದಿಯಲಿ…!
ಗುಬ್ಬಿ ಗುಲಾಬಿ, ಪಾರಿವಾಳ ಪಾರಿಜಾತ,
ಸಂಪಿಗೆ ಬಲು ಇಂಪಿನ ಕೋಗಿಲೆ,
ಮುಕುರುತಾವ ಮುಗಿಬಿದ್ದು
ಇಳಿಬಿಟ್ಟ ಕಾಲಿಗೆ,
ದಡದ ತುಂಬಾ ಧುಮ್ಮಿಕ್ಕುವ ಹಸಿರು!
ಬಳ್ಳಿ ತುದಿಯಲಿ ಬಣ್ಣ ಬಣ್ಣದ ಮೀನರಳಿ!
ಮಾತಾಡುತಾವ…
ಕಿವಿಯ ಎದೆ ತೆರೆದು ತುಂಬಿಕೊ ಜೀವ…
ಕವಿತೆ ಭಾವನಾತ್ಮಕವಾಗಿ ಚನ್ನಾಗಿದೆ.
appata kavite. tumba chennagide.